ತಾಲ್ಲೂಕು ಆಡಳಿತ ಮತ್ತು ಪೋಲೀಸರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದಾಗಿ, ಕನ್ನಡಿಗರು ಅಂಗಡಿ ಮತ್ತು ಮನೆಗಳ ಎದುರು ರಂಗೋಲಿ ಬಿಡಿಸಿ ಶುಭಾಶಯ ಕೋರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ಎಸ್ಪಿ ಲಕ್ಷ್ಮಣ ನಿಂಬರಗಿ ನಿರ್ದೇಶನದ ಮೇರೆಗೆ ಅಥಣಿ ಸಿಪಿಐ ಶಂಕರಗೌಡ ಪಾಟೀಲ ಮತ್ತು ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಗ್ರಾಮಕ್ಕೆ ತೆರಳಿ ಕರಾಳ ದಿನ ಆಚರಿಸದಂತೆ ಎಂಇಎಸ್ ಮುಖಂಡರಿಗೆ ಎಚ್ಚರಿಸಿದ್ದರು.