ತೀರ್ಥಹಳ್ಳಿ: ತಾಲ್ಲೂಕಿನ ಬಸವಾನಿ ಸಮೀಪ ಶುಂಠಿಕಟ್ಟೆ ಗ್ರಾಮದವರಾದ ಇಸ್ರೊದ ನಿವೃತ್ತ ವಿಜ್ಞಾನಿ ಎಸ್.ಸಿ. ರತ್ನಾಕರ (64) ಬುಧವಾರ ಕಾರ್ಕಳ ತಾಲ್ಲೂಕಿನ ಎಣ್ಣೆಹೊಳೆ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟರು.
ರತ್ನಾಕರ ಅವರು ಅವಿವಾಹಿತರಾಗಿದ್ದು, ಕಾರ್ಕಳ ಬೈಲೂರು ರಾಮಕೃಷ್ಣಾಶ್ರಮದಲ್ಲಿ ತಂಗಿದ್ದರು. ತುಂಗಾ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಅವರು ಕಾಲೇಜಿನ ಶೈಕ್ಷಣಿಕ ಸಲಹಾ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದರು.
ತಾಲ್ಲೂಕಿನ ಶುಂಠಿಕಟ್ಟೆಯಲ್ಲಿ ಗುರುವಾರ ರತ್ನಾಕರ ಅವರ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.