ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು 7,598 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
'ಸಿಎಂ ತವರು ಜಿಲ್ಲೆಯ' ಹಾನಗಲ್ ಕ್ಷೇತ್ರದಲ್ಲಿ ಗೆದ್ದೇ ತೀರುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
"ಆಪತ್ಬಾಂಧವ" ಎಂಬ ಬಿರುದಿಗೆ ಪಾತ್ರರಾಗಿದ್ದ ಶ್ರೀನಿವಾಸ ಮಾನೆ ಅವರ ಗೆಲುವಿಗೆ ಕೋವಿಡ್ ಕಾಲದಲ್ಲಿ ಜನರಿಗೆ ಸ್ಪಂದನೆ ಹಾಗೂ ಕಾಂಗ್ರೆಸ್ ಸರ್ಕಾರದ 'ಭಾಗ್ಯಗಳ ಯೋಜನೆ' ಸಹಕಾರಿಯಾಗಿವೆ ಎನ್ನಲಾಗುತ್ತಿದೆ.
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (19 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 79,515
ಕಾಂಗ್ರೆಸ್- ಶ್ರೀನಿವಾಸ ಮಾನೆ- 87,113
ಜೆಡಿಎಸ್- ನಿಯಾಜ್ ಶೇಖ್- 921
ಕಾಂಗ್ರೆಸ್ಗೆ 7,598 ಮತಗಳ ಮುನ್ನಡೆ
ಹಾನಗಲ್ ಕ್ಷೇತ್ರ: ಕಡೆಯ ಒಂದು ಸುತ್ತು (19ನೇ) ಬಾಕಿ ಇದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಗೆಲುವು ಬಹುತೇಕ ಖಚಿತವಾಗಿದೆ. ಹಾವೇರಿ ನಗರ ಮತ್ತು ಹಾನಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ, ಹರ್ಷೋದ್ಗಾರ, ಜೈಕಾರ ಮೊಳಗುತ್ತಿದೆ.
ಹುಬ್ಬಳ್ಳಿ: ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ ದುರ್ಬಲರಾಗಿದ್ದರೋ ಅಥವಾ ಅವರ ಬಗ್ಗೆ ಕ್ಷೇತ್ರದಲ್ಲಿ ಅಪಸ್ವರವಿತ್ತೋ ಗೊತ್ತಿಲ್ಲ. ಆದರೆ, ಮತದಾರರ ನಿರ್ಣಯಕ್ಕೆ ತಲೆ ಬಾಗುತ್ತೇವೆ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (18 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 75,999
ಕಾಂಗ್ರೆಸ್- ಶ್ರೀನಿವಾಸ ಮಾನೆ- 83,324
ಜೆಡಿಎಸ್- ನಿಯಾಜ್ ಶೇಖ್- 866
ಕಾಂಗ್ರೆಸ್ಗೆ 7,325 ಮತಗಳ ಮುನ್ನಡೆ
ಹಾನಗಲ್ ಉಪಚುನಾವಣೆ: 16ನೇ ಸುತ್ತಿನ ಮತ ಎಣಿಕೆ
6828 ಮತಗಳಿಂದ ಕಾಂಗ್ರೆಸ್ ಮುನ್ನಡೆ
ಬಿಜೆಪಿ: 66,622
ಕಾಂಗ್ರೆಸ್: 73,450
ಜೆಡಿಎಸ್: 767
ಸಿಂದಗಿ ವಿಧಾನಸಭಾ ಉಪ ಚುನಾವಣೆ 22ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 31,088 ಮತಗಳಿಂದ ಜಯ ಗಳಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (22 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 62,292
*ರಮೇಶ ಭೂಸನೂರ (ಬಿಜೆಪಿ): 93,380
*ನಾಜಿಯಾ ಅಂಗಡಿ (ಜೆಡಿಎಸ್): 4321