ಶುಕ್ರವಾರ, ಮಾರ್ಚ್ 31, 2023
33 °C

ಸುಧಾಕರ್ ಆರೋಗ್ಯ ಇಲಾಖೆಗೆ ಹಿಡಿದ ಗ್ರಹಣ, ಕಮಿಷನ್ ಒಂದೇ ಅವರ ಧ್ಯೇಯ: ಕಾಂಗ್ರೆಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಆರೋಗ್ಯ ಇಲಾಖೆಗೆ ಹಿಡಿದ ಗ್ರಹಣವಿದ್ದಂತೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಆರೋಗ್ಯ ಇಲಾಖೆಯ ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿರುವ ವಿಶೇಷ ಲೇಖನಗಳನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ. 

‘ಇತ್ತೀಚಿಗೆ ನಡೆದ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ ಗರ್ಭಿಣಿ, ಮಗುವಿನ ಸಾವಿನ ಪ್ರಕರಣ ರಾಜ್ಯದ ಆರೋಗ್ಯ ಇಲಾಖೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿ. ಕೊರೊನಾ ಸಮಯದಲ್ಲಿನ ಸವಾಲುಗಳಿಂದ ಪಾಠ ಕಲಿಯದ, ಸುಧಾರಣಾ ಕ್ರಮ ಕೈಗೊಳ್ಳದ ಸಚಿವ ಸುಧಾಕರ್ ಅವರು ಆರೋಗ್ಯ ಇಲಾಖೆಗೆ ಹಿಡಿದ ಗ್ರಹಣವಿದ್ದಂತೆ. ಕಮಿಷನ್ ಒಂದೇ ಅವರ ಧ್ಯೇಯ!’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 

‘108 ಆಂಬುಲೆನ್ಸ್ ಅವ್ಯವಸ್ಥೆಗಳು, ವೆಂಟಿಲೇಟರ್ ಅವ್ಯವಸ್ಥೆಯಿಂದ ಬಳ್ಳಾರಿ ವಿಮ್ಸ್‌ನಲ್ಲಿನ ಸಾವುಗಳು, ಹಾಸನದಲ್ಲಿ ಚಿಕಿತ್ಸೆ ನಿರಾಕರಿಸಿ ಗರ್ಭಿಣಿಯ ಸಾವು, ಚಾಮರಾಜನಗರ ಆಕ್ಸಿಜನ್ ದುರಂತ, ಕಾರ್ಯನಿರ್ವಹಿಸದ ಡಯಾಲಿಸಿಸ್ ಕೇಂದ್ರಗಳು, ಒಂದೇ ಬೆಡ್‌ನಲ್ಲಿ 3 ರೋಗಿಗಳು... ಇದಕ್ಕೆ ಆರೋಗ್ಯ ಇಲಾಖೆಗೆ ಹಿಡಿದ 'ಸುಧಾಕರ್' ಎಂಬ ಗ್ರಹಣವೇ ಕಾರಣ’ ಎಂದು ಕಾಂಗ್ರೆಸ್‌ ಗುಡುಗಿದೆ. 

ಓದಿ... ಒಳನೋಟ | ಆರೋಗ್ಯ ಸೇವೆಗೆ ಅಲೆದಾಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು