ಈ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಸವರಾಜ ಬೊಮ್ಮಾಯಿ ಅವರೇ, ‘ಭ್ರಷ್ಟ, ದೇಶದ್ರೋಹಿ, ಕೊಲೆಗಡುಕ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸದೆ ಮದುವೆ ಗಂಡಿನ ರೀತಿ ಮೆರವಣಿಗೆ ಮಾಡಲು, ನಿಮ್ಮ ನಿವಾಸದೆದುರು 'ಭ್ರಷ್ಟರ ಜಾತ್ರೆ' ಮಾಡಲು ಅವಕಾಶ ಕೊಟ್ಟಿದ್ದಿರಲ್ಲ ನಾಚಿಕೆ ಎನಿಸುವುದಿಲ್ಲವೇ?, ಸರ್ಕಾರದ ಸಿಎಂ ನಿವಾಸ ಪ್ರಜಾಪ್ರಭುತ್ವ ವ್ಯವಸ್ಥೆಯ ಬಾಗವೇ ಅಥವಾ ಬಿಜೆಪಿಗರ ಪಿತ್ರಾಜಿತ ಆಸ್ತಿಯೇ’ ಎಂದು ಪ್ರಶ್ನಿಸಿದೆ.