ಬಿಎಸ್ವೈ, ಹೈಕಮಾಂಡ್ ಎರಡೂ ದುರ್ಬಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟ್ವಿಟರ್ನಲ್ಲಿ ತಿರುಗೇಟು ಕೊಟ್ಟಿರುವ ಬಿಜಿಪಿ, ‘ಸಿದ್ದರಾಮಯ್ಯನವರೇ, ಒಂದು ರಾಷ್ಟ್ರೀಯ ಪಕ್ಷಕ್ಕೆ ಖಾಯಂ ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡಲಾಗದ ನೀವು ಬಿಜೆಪಿ ಪಕ್ಷದ ಬಗ್ಗೆ ಮಾತನಾಡುವುದು ಮೂರ್ಖತನ’ ಎಂದು ಕಿಡಿಕಾರಿದೆ.
‘ಸಿದ್ದರಾಮಯ್ಯ ಅವರು ಮುಳುಗುತ್ತಿರುವ ದೋಣಿಯಲ್ಲಿ ಕುಳಿತು ಮೊಸಳೆ ತಬ್ಬಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ. ಮೊದಲು ತಮ್ಮ ಪಕ್ಷದ ಹುಳುಕು ಸರಿಪಡಿಸಿಕೊಳ್ಳಿ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.