<p><strong>ಬೆಂಗಳೂರು:</strong> ಕೇರಳದಲ್ಲಿ ಜನರು ಎಡಪಕ್ಷಗಳ ನೇತೃತ್ವದ ಎಲ್ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟಗಳ ದುರಾಡಳಿತದಿಂದ ಬೇಸತ್ತುಹೋಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯತ್ತ ಒಲವು ಹೊಂದಿದ್ದಾರೆ ಎಂದು ಬಿಜೆಪಿಯ ಕೇರಳ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.</p>.<p>ನಗರದಲ್ಲಿ ನೆಲೆಸಿರುವ ಕೇರಳದ ಜನರೊಂದಿಗೆ ಭಾನುವಾರ ಸಂವಾದ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಎರಡೂ ಮೈತ್ರಿಕೂಟಗಳು 70 ವರ್ಷಗಳಿಂದ ಕೇರಳದ ಜನರನ್ನು ಕತ್ತಲೆಯಲ್ಲಿಟ್ಟು, ರಾಜಕೀಯ ಮಾಡುತ್ತಿವೆ. ಎರಡೂ ಮೈತ್ರಿಕೂಟಗಳ ಆಡಳಿತ ಸಂಪೂರ್ಣ ವಿಫಲವಾಗಿದೆ. ಈ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ’ ಎಂದರು.</p>.<p>ಎಲ್ಡಿಎಫ್ ಮೈತ್ರಿಕೂಟದ ಸರ್ಕಾರ ರಾಜಕೀಯ ಕಿರುಕುಳ, ರಾಜಕೀಯ ವೈಷಮ್ಯದ ಕೊಲೆ ಹಾಗೂ ಸೇಡಿನ ರಾಜಕೀಯದಲ್ಲೇ ಮುಳುಗಿದೆ. ಎರಡೂ ಮೈತ್ರಿಕೂಟಗಳು ಜಾತಿ, ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಿ ರಾಜಕೀಯ ಲಾಭ ಪಡೆಯುತ್ತಿವೆ ಎಂದು ದೂರಿದರು.</p>.<p>‘ಎಲ್ಡಿಎಫ್ ಮೈತ್ರಿಕೂಟದ ಆಡಳಿತದಿಂದ ಕೇರಳಕ್ಕೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಎಡ ಪಕ್ಷಗಳು ದೇಶಕ್ಕೆ ಅಪ್ರಸ್ತುತವಾಗಿವೆ. ಹಲವು ಪಕ್ಷಗಳಿಗೆ ಕೇರಳದಲ್ಲಿ ನಾಯಕತ್ವವೇ ಇಲ್ಲ. ಬಿಜೆಪಿಯ ಸಂಘಟನೆ ಬಲವಾಗಿದೆ. ಈ ಬಾರಿ ಬಿಜೆಪಿ ಕೇರಳದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೇರಳದಲ್ಲಿ ಜನರು ಎಡಪಕ್ಷಗಳ ನೇತೃತ್ವದ ಎಲ್ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟಗಳ ದುರಾಡಳಿತದಿಂದ ಬೇಸತ್ತುಹೋಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯತ್ತ ಒಲವು ಹೊಂದಿದ್ದಾರೆ ಎಂದು ಬಿಜೆಪಿಯ ಕೇರಳ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.</p>.<p>ನಗರದಲ್ಲಿ ನೆಲೆಸಿರುವ ಕೇರಳದ ಜನರೊಂದಿಗೆ ಭಾನುವಾರ ಸಂವಾದ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಎರಡೂ ಮೈತ್ರಿಕೂಟಗಳು 70 ವರ್ಷಗಳಿಂದ ಕೇರಳದ ಜನರನ್ನು ಕತ್ತಲೆಯಲ್ಲಿಟ್ಟು, ರಾಜಕೀಯ ಮಾಡುತ್ತಿವೆ. ಎರಡೂ ಮೈತ್ರಿಕೂಟಗಳ ಆಡಳಿತ ಸಂಪೂರ್ಣ ವಿಫಲವಾಗಿದೆ. ಈ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ’ ಎಂದರು.</p>.<p>ಎಲ್ಡಿಎಫ್ ಮೈತ್ರಿಕೂಟದ ಸರ್ಕಾರ ರಾಜಕೀಯ ಕಿರುಕುಳ, ರಾಜಕೀಯ ವೈಷಮ್ಯದ ಕೊಲೆ ಹಾಗೂ ಸೇಡಿನ ರಾಜಕೀಯದಲ್ಲೇ ಮುಳುಗಿದೆ. ಎರಡೂ ಮೈತ್ರಿಕೂಟಗಳು ಜಾತಿ, ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಿ ರಾಜಕೀಯ ಲಾಭ ಪಡೆಯುತ್ತಿವೆ ಎಂದು ದೂರಿದರು.</p>.<p>‘ಎಲ್ಡಿಎಫ್ ಮೈತ್ರಿಕೂಟದ ಆಡಳಿತದಿಂದ ಕೇರಳಕ್ಕೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಎಡ ಪಕ್ಷಗಳು ದೇಶಕ್ಕೆ ಅಪ್ರಸ್ತುತವಾಗಿವೆ. ಹಲವು ಪಕ್ಷಗಳಿಗೆ ಕೇರಳದಲ್ಲಿ ನಾಯಕತ್ವವೇ ಇಲ್ಲ. ಬಿಜೆಪಿಯ ಸಂಘಟನೆ ಬಲವಾಗಿದೆ. ಈ ಬಾರಿ ಬಿಜೆಪಿ ಕೇರಳದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>