ವಿಧಾನಸಭೆಯಲ್ಲಿ ಬಿಜೆಪಿಯ ಅಭಯ ಪಾಟೀಲ ಪ್ರಶ್ನೆಗೆ ಬುಧವಾರ ಉತ್ತರಿಸಿದ ಅವರು, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಆಧಾರದಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಎಸ್ಸಿಪಿ ಹಾಗೂ ಟಿಎಸ್ಪಿ ಅನುದಾನ ಹಂಚಿಕೆ ಮಾಡಲಾಗುವುದು. ಮೀಸಲು ಕ್ಷೇತ್ರಗಳಿಗೆ ಪ್ರಥಮ ಆದ್ಯತೆ, ಒಟ್ಟು ಜನಸಂಖ್ಯೆಯ ಶೇಕಡ 30ಕ್ಕಿಂತ ಹೆಚ್ಚು ಮಂದಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ವಾಸಿಸುವ ಕ್ಷೇತ್ರಗಳಿಗೆ ಎರಡನೆ ಆದ್ಯತೆ ಮತ್ತು ಇತರ ಕ್ಷೇತ್ರಗಳಿಗೆ ಕೊನೆಯ ಆದ್ಯತೆ ನೀಡಿ ಅನುದಾನ ಹಂಚಿಕ ಮಾಡುವ ಕ್ರಮ ಜಾರಿಗೆ ಬರಲಿದೆ’ ಎಂದರು.