ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಕಾರಣ ಕೆಆರ್ಎಸ್ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚುತ್ತಿದೆ. ಸೋಮವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 120.46 ಅಡಿಗೆ ತಲುಪಿದೆ.
ಜಲಾಶಯ ಭರ್ತಿಯಾಗಲು ಕೇವಲ 4.34 ಅಡಿ ಮಾತ್ರವೇ ಬಾಕಿ ಉಳಿದಿದೆ. ಸೋಮವಾರ ಸಂಜೆ ವೇಳೆಗೆ 19,740 ಕ್ಯುಸೆಕ್ ಒಳಹರಿವು 5,496 ಹೊರಹರಿವು ಇತ್ತು. ವಾರದಿಂದೀಚೆಗೆ ಜಲಾಶಯಕ್ಕೆ 5 ಅಡಿ ನೀರು ಹರಿದು ಬಂದಿದೆ.