ಬೆಂಗಳೂರು: ಕಮಿಷನ್ ಪ್ರಕರಣದ ಆರೋಪಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಪಿಎಸ್ಐ ಪರೀಕ್ಷೆ ಅಕ್ರಮದ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರನ್ನು ಬಂಧಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ಕೆಪಿಸಿಸಿ, ‘ಶೇ 40 ಕಮಿಷನ್ ಹಗರಣದ ಆರೋಪಿ ಈಶ್ವರಪ್ಪನವರ ಬಂಧನ ಆಗಿಲ್ಲ. ಪಿಎಸ್ಐ ಪರೀಕ್ಷೆ ಅಕ್ರಮದ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಬಂಧನವೂ ಆಗಿಲ್ಲ. ದಿವ್ಯಾ ಹಾಗರಗಿಯನ್ನು ಹುಡುಕಲಾಗದಷ್ಟು ಪೊಲೀಸರು ಅಸಮರ್ಥರೇನಲ್ಲ’ ಎಂದು ಹೇಳಿದೆ.
‘ಈ ಮಟ್ಟಿಗೆ ಆರೋಪಿಗಳ ರಕ್ಷಣೆಗೆ ನಿಂತಿರುವವರು ಯಾರು? ಏಕೆ? ದೊಡ್ಡವರ ಹೆಸರುಗಳು ಬಯಲಾಗುವ ಭಯವೇ? ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಉತ್ತರಿಸುವರೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
40% ಕಮಿಷನ್ ಹಗರಣ - ಭ್ರಷ್ಟ ಈಶ್ವರಪ್ಪನವರ ಬಂಧನ ಆಗಿಲ್ಲ.
PSI ಪರೀಕ್ಷೆ ಅಕ್ರಮ - ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನ ಇನ್ನೂ ಆಗಿಲ್ಲ.