‘ಯಡಿಯೂರಪ್ಪ ಅವರಿಗೆ 75 ವರ್ಷ ದಾಟಿದರೂ ಅವಕಾಶ ನೀಡಲಾಗಿತ್ತು. ಅವರಿಗೆ ಇನ್ನೂ ಎರಡು ವರ್ಷ ಅವಕಾಶ ನೀಡಬೇಕಿತ್ತು ಎಂಬುದು ನಮ್ಮ ಸಮುದಾಯದ ಆಶಯವೂ ಆಗಿತ್ತು. ವಯಸ್ಸಿನ ಕಾರಣಕ್ಕೆ ಅವರ ಬದಲಾವಣೆ ಆಗುವುದಾದರೆ, ಈಶ್ವರಪ್ಪ ಅವರಿಗೇ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂದು ಭಾವಿಸಿದ್ದೆವು. ಆದರೆ, ಬಸವರಾಜ ಬೊಮ್ಮಾಯಿ ಅವರಿಗೆ ಆ ಸ್ಥಾನ ಸಿಕ್ಕಿದೆ. ಈಗ ಈಶ್ವರಪ್ಪ ಅವರಿಗೆ ಗೌರವದ ಸ್ಥಾನ ಎಂದರೆ ಉಪಮುಖ್ಯಮಂತ್ರಿ ಸ್ಥಾನ. ಈ ಸ್ಥಾನವನ್ನು ನಾವು ಬೇಡುವ ಅಥವಾ ಹಕ್ಕು ಮಂಡಿಸುವ ಸ್ಥಿತಿ ಬರಬಾರದಿತ್ತು. ಪಕ್ಷವೇ ಗುರುತಿಸಿ ನೀಡಬೇಕಿತ್ತು’ ಎಂದರು.