<p><strong>ಮೈಸೂರು:</strong>ಹುಣಸೂರು ಪಟ್ಟಣದೊಳಗೆಹರಿದುಹೋಗುವ ಲಕ್ಷ್ಮಣತೀರ್ಥ ನದಿಯಲ್ಲಿ ಹಸಿರು ಪಾಚಿ ಬೆಳೆದಿದ್ದು, ಕಲ್ಮಶ ಸೇರಿ ದುರ್ವಾಸನೆ ಬೀರುತ್ತಿದೆ. ತ್ಯಾಜ್ಯ ತುಂಬಿ ಚರಂಡಿಯಾಗಿ ಮಾರ್ಪಟ್ಟಿದೆ.</p>.<p>ಕಲುಷಿತ ನೀರು ಬಿಳಿಕೆರೆ ಹೋಬಳಿಯ ರಾಮೇನಹಳ್ಳಿ ಬಳಿ ಕಾವೇರಿ ನದಿಗೆ ಸೇರಲಿದೆ. ಈಗಲೂ ಹುಣಸೂರು ನಗರದಿಂದ ಕೊಳಚೆ ನೀರು ಲಕ್ಷ್ಮಣತೀರ್ಥ ನದಿಗೆ ಸೇರುತ್ತಲೇ ಇದೆ. ಹಲವು ಬಾರಿ ಅನುದಾನ ಬಿಡುಗಡೆಯಾಗಿದ್ದರೂ ಶುದ್ಧೀಕರಣ ಪೂರ್ಣ ನಡೆಯಲಿಲ್ಲ.</p>.<p class="Subhead">ಸ್ವಚ್ಛತೆಗೆ ಯೋಜನೆ:ಜೀವನದಿ ಕಾವೇರಿ ಹಾಗೂ ಅದರ ಉಪಪನದಿಗಳು ಭಾರಿ ಪ್ರಮಾಣದಲ್ಲಿ ಕಲುಷಿತ ಆಗುತ್ತಿರುವುದರಿಂದ ಗಂಗಾ ನದಿ ಮಾದರಿಯಲ್ಲಿಯೇ ಸ್ವಚ್ಛತಾ ಅಭಿಯಾನ ಈಗ ರೂಪಿಸಲು ರಾಜ್ಯ ಸರ್ಕಾರ ಈಗ ಮುಂದಾಗಿದೆ.</p>.<p>ಈ ನಿಟ್ಟಿನಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಿಸಿದ ಇಲಾಖೆಗಳಿಗೆ ನೋಟಿಸ್ ನೀಡಲು ಪರಿಸರ ಹಾಗೂ ಜೀವಿವಿಜ್ಞಾನ ಇಲಾಖೆ ನಿರ್ಧರಿಸಿದೆ.</p>.<p>ಪ್ರಮುಖವಾಗಿ ಕುಶಾಲನಗರ, ಹುಣಸೂರು, ನಂಜನಗೂಡು, ಶ್ರೀರಂಗಪಟ್ಟಣ, ತಿ.ನರಸೀಪುರ, ಕೊಳ್ಳೇಗಾಲ ಪಟ್ಟಣಗಳ ಕೊಳಚೆ ನೀರು ಕಾವೇರಿ ಅಥವಾ ಅದರ ಉಪನದಿಗಳಿಗೆ ಸೇರುತ್ತಿದೆ.</p>.<p>‘ಕಾವೇರಿ ನದಿ ಹಾಗೂ ಉಪನದಿಗಳು ಕಲುಷಿತಗೊಳ್ಳುತ್ತಿರುವ ಕಾರಣ ಸಂಬಂಧಿಸಿದ ಇಲಾಖೆಗಳಿಗೆ ನೋಟಿಸ್ ನೀಡಲಾಗುವುದು. ನೀರು ಬಳಕೆ ಮಾಡಲಾಗದಷ್ಟು ನದಿಗಳು ಮಲಿನಗೊಂಡಿವೆ. ಕಾವೇರಿ ನದಿ ಉದ್ದಗಲಕ್ಕೂ ಸ್ವಚ್ಛತೆ ಅಭಿಯಾನ ಕೈಗೊಳ್ಳಲಾಗುವುದು’ ಎಂದು ಸಚಿವ ಸಿ.ಪಿ.ಯೋಗೇಶ್ವರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>‘ಎಲ್ಲಾ ಕಡೆ ನೀರನ್ನು ನಾವೇ ಕಲುಷಿತಗೊಳಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಮಲಿನ ನೀರನ್ನು ಕುಡಿಯುತ್ತಿದ್ದೇವೆ’ ಎಂದರು.</p>.<p>ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಸುಮಾರು 98 ಉಪನದಿ, ತೊರೆ, ಹಳ್ಳಗಳು ಕಾವೇರಿ ನದಿ ಸೇರುತ್ತಿವೆ. ಈ ನದಿ ಪಾತ್ರಗಳ ವ್ಯಾಪ್ತಿಗೆ ಬರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ್ದರಿಂದ ಕೊಳಚೆ ನೀರು ಜಲಮೂಲ ಸೇರುತ್ತಿದೆ. ಕೊಳಚೆ ನೀರನ್ನು ಸಂಸ್ಕರಿಸದೆ ನದಿಗೆ ಹರಿಸುತ್ತಿರುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್ಪಿಸಿಬಿ) ಈಚೆಗೆ ಸರ್ಕಾರಕ್ಕೆ ಪತ್ರ ಬರೆದಿತ್ತು.</p>.<p>ಕೊಡಗು ಜಿಲ್ಲೆಯಲ್ಲಿ ನದಿ ಪಾತ್ರಗಳಲ್ಲೇ ರೆಸಾರ್ಟ್ ಹಾಗೂ ಹೋಂಸ್ಟೇ ಹೆಚ್ಚುತ್ತಿವೆ. ಜೊತೆಗೆ ಕಾಫಿ ಕೊಯ್ಲು ಸಂದರ್ಭದಲ್ಲಿ ಕಾಫಿಪಲ್ಪಿಂಗ್ ಮಾಡಿದ ನೀರು ಹಾಗೂ ಕೈಗಾರಿಕೆಗಳ ಕಲುಷಿತ ನೀರು ನದಿಗೆ ಹರಿಯುತ್ತಿದೆ.</p>.<p>ನದಿಯಲ್ಲಿ ಸ್ನಾನ ಮಾಡುವವರು, ಪೂಜೆಗೆ ಬರುವವರು ಹಳೆಯ ಬಟ್ಟೆಗಳನ್ನು ನದಿಗೆ ಎಸೆಯುತ್ತಾರೆ. ಪಿಂಡ ಪ್ರದಾನ, ಅಸ್ಥಿವಿಸರ್ಜನೆ, ಹೋಮ, ಹವನ ಸಂದರ್ಭದಲ್ಲಿ ಅನ್ನ, ಹಣ್ಣು, ತರಕಾರಿ, ಇತರೆ ವಸ್ತುಗಳನ್ನು ನದಿ ಒಡಲಿಗೆ ಹಾಕುತ್ತಿದ್ದಾರೆ.</p>.<p>‘ಕಾವೇರಿ ನದಿಯ ಹಲವೆಡೆ ಪೊದೆ, ಸತ್ತೆ ಗಿಡ ಬೆಳೆದು ತ್ಯಾಜ್ಯ ತುಂಬಿದೆ. ನೀರುಸರಾಗವಾಗಿ ಹರಿಯಲು ಸಾಧ್ಯವಾಗದ ಸ್ಥಿತಿ ಇದೆ’ ಎನ್ನುತ್ತಾರೆ ಕಾವೇರಿ ನದಿ ಬಗ್ಗೆ ಯುಜಿಸಿಗೆ ಸಂಶೋಧನಾ ವರದಿ ಸಲ್ಲಿಸಿರುವ ಪ್ರೊ.ರಂಗರಾಜು.</p>.<p>***</p>.<p>ನಗರ, ಪಟ್ಟಣಗಳಲ್ಲಿ ಕೊಳಚೆ ನೀರನ್ನು ಸಂಸ್ಕರಿಸದೆ ಕಾವೇರಿ ಹಾಗೂ ಉಪನದಿಗಳಿಗೆ ಹರಿಸಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು</p>.<p><strong>- ಸಿ.ಪಿ.ಯೋಗೇಶ್ವರ್,ಪರಿಸರ ಹಾಗೂ ಜೀವಿ ವಿಜ್ಞಾನ ಸಚಿವ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong>ಹುಣಸೂರು ಪಟ್ಟಣದೊಳಗೆಹರಿದುಹೋಗುವ ಲಕ್ಷ್ಮಣತೀರ್ಥ ನದಿಯಲ್ಲಿ ಹಸಿರು ಪಾಚಿ ಬೆಳೆದಿದ್ದು, ಕಲ್ಮಶ ಸೇರಿ ದುರ್ವಾಸನೆ ಬೀರುತ್ತಿದೆ. ತ್ಯಾಜ್ಯ ತುಂಬಿ ಚರಂಡಿಯಾಗಿ ಮಾರ್ಪಟ್ಟಿದೆ.</p>.<p>ಕಲುಷಿತ ನೀರು ಬಿಳಿಕೆರೆ ಹೋಬಳಿಯ ರಾಮೇನಹಳ್ಳಿ ಬಳಿ ಕಾವೇರಿ ನದಿಗೆ ಸೇರಲಿದೆ. ಈಗಲೂ ಹುಣಸೂರು ನಗರದಿಂದ ಕೊಳಚೆ ನೀರು ಲಕ್ಷ್ಮಣತೀರ್ಥ ನದಿಗೆ ಸೇರುತ್ತಲೇ ಇದೆ. ಹಲವು ಬಾರಿ ಅನುದಾನ ಬಿಡುಗಡೆಯಾಗಿದ್ದರೂ ಶುದ್ಧೀಕರಣ ಪೂರ್ಣ ನಡೆಯಲಿಲ್ಲ.</p>.<p class="Subhead">ಸ್ವಚ್ಛತೆಗೆ ಯೋಜನೆ:ಜೀವನದಿ ಕಾವೇರಿ ಹಾಗೂ ಅದರ ಉಪಪನದಿಗಳು ಭಾರಿ ಪ್ರಮಾಣದಲ್ಲಿ ಕಲುಷಿತ ಆಗುತ್ತಿರುವುದರಿಂದ ಗಂಗಾ ನದಿ ಮಾದರಿಯಲ್ಲಿಯೇ ಸ್ವಚ್ಛತಾ ಅಭಿಯಾನ ಈಗ ರೂಪಿಸಲು ರಾಜ್ಯ ಸರ್ಕಾರ ಈಗ ಮುಂದಾಗಿದೆ.</p>.<p>ಈ ನಿಟ್ಟಿನಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಿಸಿದ ಇಲಾಖೆಗಳಿಗೆ ನೋಟಿಸ್ ನೀಡಲು ಪರಿಸರ ಹಾಗೂ ಜೀವಿವಿಜ್ಞಾನ ಇಲಾಖೆ ನಿರ್ಧರಿಸಿದೆ.</p>.<p>ಪ್ರಮುಖವಾಗಿ ಕುಶಾಲನಗರ, ಹುಣಸೂರು, ನಂಜನಗೂಡು, ಶ್ರೀರಂಗಪಟ್ಟಣ, ತಿ.ನರಸೀಪುರ, ಕೊಳ್ಳೇಗಾಲ ಪಟ್ಟಣಗಳ ಕೊಳಚೆ ನೀರು ಕಾವೇರಿ ಅಥವಾ ಅದರ ಉಪನದಿಗಳಿಗೆ ಸೇರುತ್ತಿದೆ.</p>.<p>‘ಕಾವೇರಿ ನದಿ ಹಾಗೂ ಉಪನದಿಗಳು ಕಲುಷಿತಗೊಳ್ಳುತ್ತಿರುವ ಕಾರಣ ಸಂಬಂಧಿಸಿದ ಇಲಾಖೆಗಳಿಗೆ ನೋಟಿಸ್ ನೀಡಲಾಗುವುದು. ನೀರು ಬಳಕೆ ಮಾಡಲಾಗದಷ್ಟು ನದಿಗಳು ಮಲಿನಗೊಂಡಿವೆ. ಕಾವೇರಿ ನದಿ ಉದ್ದಗಲಕ್ಕೂ ಸ್ವಚ್ಛತೆ ಅಭಿಯಾನ ಕೈಗೊಳ್ಳಲಾಗುವುದು’ ಎಂದು ಸಚಿವ ಸಿ.ಪಿ.ಯೋಗೇಶ್ವರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>‘ಎಲ್ಲಾ ಕಡೆ ನೀರನ್ನು ನಾವೇ ಕಲುಷಿತಗೊಳಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಮಲಿನ ನೀರನ್ನು ಕುಡಿಯುತ್ತಿದ್ದೇವೆ’ ಎಂದರು.</p>.<p>ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಸುಮಾರು 98 ಉಪನದಿ, ತೊರೆ, ಹಳ್ಳಗಳು ಕಾವೇರಿ ನದಿ ಸೇರುತ್ತಿವೆ. ಈ ನದಿ ಪಾತ್ರಗಳ ವ್ಯಾಪ್ತಿಗೆ ಬರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ್ದರಿಂದ ಕೊಳಚೆ ನೀರು ಜಲಮೂಲ ಸೇರುತ್ತಿದೆ. ಕೊಳಚೆ ನೀರನ್ನು ಸಂಸ್ಕರಿಸದೆ ನದಿಗೆ ಹರಿಸುತ್ತಿರುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್ಪಿಸಿಬಿ) ಈಚೆಗೆ ಸರ್ಕಾರಕ್ಕೆ ಪತ್ರ ಬರೆದಿತ್ತು.</p>.<p>ಕೊಡಗು ಜಿಲ್ಲೆಯಲ್ಲಿ ನದಿ ಪಾತ್ರಗಳಲ್ಲೇ ರೆಸಾರ್ಟ್ ಹಾಗೂ ಹೋಂಸ್ಟೇ ಹೆಚ್ಚುತ್ತಿವೆ. ಜೊತೆಗೆ ಕಾಫಿ ಕೊಯ್ಲು ಸಂದರ್ಭದಲ್ಲಿ ಕಾಫಿಪಲ್ಪಿಂಗ್ ಮಾಡಿದ ನೀರು ಹಾಗೂ ಕೈಗಾರಿಕೆಗಳ ಕಲುಷಿತ ನೀರು ನದಿಗೆ ಹರಿಯುತ್ತಿದೆ.</p>.<p>ನದಿಯಲ್ಲಿ ಸ್ನಾನ ಮಾಡುವವರು, ಪೂಜೆಗೆ ಬರುವವರು ಹಳೆಯ ಬಟ್ಟೆಗಳನ್ನು ನದಿಗೆ ಎಸೆಯುತ್ತಾರೆ. ಪಿಂಡ ಪ್ರದಾನ, ಅಸ್ಥಿವಿಸರ್ಜನೆ, ಹೋಮ, ಹವನ ಸಂದರ್ಭದಲ್ಲಿ ಅನ್ನ, ಹಣ್ಣು, ತರಕಾರಿ, ಇತರೆ ವಸ್ತುಗಳನ್ನು ನದಿ ಒಡಲಿಗೆ ಹಾಕುತ್ತಿದ್ದಾರೆ.</p>.<p>‘ಕಾವೇರಿ ನದಿಯ ಹಲವೆಡೆ ಪೊದೆ, ಸತ್ತೆ ಗಿಡ ಬೆಳೆದು ತ್ಯಾಜ್ಯ ತುಂಬಿದೆ. ನೀರುಸರಾಗವಾಗಿ ಹರಿಯಲು ಸಾಧ್ಯವಾಗದ ಸ್ಥಿತಿ ಇದೆ’ ಎನ್ನುತ್ತಾರೆ ಕಾವೇರಿ ನದಿ ಬಗ್ಗೆ ಯುಜಿಸಿಗೆ ಸಂಶೋಧನಾ ವರದಿ ಸಲ್ಲಿಸಿರುವ ಪ್ರೊ.ರಂಗರಾಜು.</p>.<p>***</p>.<p>ನಗರ, ಪಟ್ಟಣಗಳಲ್ಲಿ ಕೊಳಚೆ ನೀರನ್ನು ಸಂಸ್ಕರಿಸದೆ ಕಾವೇರಿ ಹಾಗೂ ಉಪನದಿಗಳಿಗೆ ಹರಿಸಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು</p>.<p><strong>- ಸಿ.ಪಿ.ಯೋಗೇಶ್ವರ್,ಪರಿಸರ ಹಾಗೂ ಜೀವಿ ವಿಜ್ಞಾನ ಸಚಿವ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>