ಬೆಂಗಳೂರು: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿರುವ ಸೊರಬ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ಬೆಳಿಗ್ಗೆ ಭೇಟಿಮಾಡಿ ಸಮಾಲೋಚನೆ ನಡೆಸಿದರು.
ಸದಾಶಿವನಗರದ ಶಿವಕುಮಾರ್ ಅವರ ನಿವಾಸದಲ್ಲಿ ಇಬ್ಬರ ಭೇಟಿ ನಡೆಯಿತು.
ಮಧು ಬಂಗಾರಪ್ಪ ಅವರ ಕೆಲವು ಬೆಂಬಲಿಗರೂ ಜತೆಗಿದ್ದರು.
'ನಾನು ಈಗಿನಿಂದಲೇ ಕಾಂಗ್ರೆಸಿಗ. ಅಧಿಕೃತವಾಗಿ ಪಕ್ಷ ಸೇರುವುದಷ್ಟೇ ಬಾಕಿ ಇದೆ' ಎಂದು ಮಧು ಬಂಗಾರಪ್ಪ ಹೇಳಿದರು.