‘ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿ ಸಂಯುಕ್ತ ಮಹಾರಾಷ್ಟ್ರ ಆಗುವುದು’ ಎಂಬ ಪೋಸ್ಟರ್ ಅನ್ನು ಬಸ್ ಮೇಲೆ ಅಂಟಿಸಿದ್ದಾರೆ. ‘ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ, ಪುಣೆ’ ಹೆಸರು ಆ ಪೋಸ್ಟರ್ನಲ್ಲಿದೆ. ಇನ್ನೂ ಕೆಲವು ಬಸ್ಗಳ ಮೇಲೆ ಈ ರೀತಿಯ ಪೋಸ್ಟರ್ ಹಾಕಲಾಗಿದೆ ಎನ್ನಲಾಗುತ್ತಿದೆ. ಫೋಟೊಗಳು ಸಾಮಾಜಿಕಮಾಧ್ಯಮ ದಲ್ಲಿ ಹಬ್ಬಿವೆ. ಈ ಕೃತ್ಯದ ಬಗ್ಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.