<p><strong>ಮೈಸೂರು: </strong>ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸಿಹಿಗುಂಬಳದ ಕನಿಷ್ಠ ಧಾರಣೆ ಕೆ.ಜಿಗೆ ₹ 1 ಹಾಗೂ ಗರಿಷ್ಠ ಬೆಲೆ ₹ 3ಕ್ಕೆ ಕುಸಿದಿದ್ದು, ರೈತರಲ್ಲಿ ಭಾರಿ ನಿರಾಸೆ ತರಿಸಿದೆ.</p>.<p>ಪ್ರತಿ ದಿನ 700 ಕ್ವಿಂಟಲ್ಗೂ ಹೆಚ್ಚು ಸಿಹಿಗುಂಬಳದ ಆವಕ ನಡೆದಿದೆ. ಹಿಂದಿನ ವರ್ಷ ಎಪಿಎಂಸಿಯಲ್ಲಿ ಪ್ರತಿ ಕೆ.ಜಿಗೆ ಸಗಟು ಧಾರಣೆ ₹ 21 ಇತ್ತು.</p>.<p>ಕಳೆದ ತಿಂಗಳು ಕೆ.ಜಿಗೆ ₹ 7ರಿಂದ ₹ 9ರವರೆಗೂ ದರವಿತ್ತು. ಜುಲೈನಲ್ಲಿ ದರ ₹ 18ರವರೆಗೂ ತಲುಪಿತ್ತು. ಆದರೆ, ಸೆಪ್ಟೆಂಬರ್ ಆರಂಭದಿಂದಲೂ ಬೆಲೆ ₹ 1ರಿಂದ ₹ 3ರವರೆಗೆ ಮಾತ್ರವೇ ಎಪಿಎಂಸಿಯಲ್ಲಿ ನಿಗದಿಯಾಗುತ್ತಿದ್ದು, ರೈತರಿಗೆ ಅತೀವ ನಷ್ಟ ಉಂಟಾಗಿದೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಂಜನಗೂಡಿನ ರೈತ ಕೆಂಡಗಣ್ಣಸ್ವಾಮಿ, ‘ ಸಿಹಿಗುಂಬಳ ಖರೀದಿಸಲು ವ್ಯಾಪಾರಿಗಳು ಬರುತ್ತಿಲ್ಲ. ಮಧ್ಯವರ್ತಿಗಳು ಕರುಣೆ ಇಲ್ಲದೆ ಕಡಿಮೆ ದರ ನಿಗದಿ ಮಾಡಿದ್ದಾರೆ. ಅದರಿಂದ ನಮಗೆ ಸಾಗಾಣಿಕೆ ವೆಚ್ಚವೂ ಸಿಗುವುದಿಲ್ಲ. ಹೊಲದಲ್ಲೇ ಕುಂಬಳವನ್ನು ಬಿಡುವೆ, ಮಾರುಕಟ್ಟೆಗೆ ತರುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p class="Subhead">ದರ ಕುಸಿತ ಏಕೆ?: ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರು<br />ವುದರಿಂದ ಹೆಚ್ಚಿನ ನಿರ್ಬಂಧಗಳನ್ನು ಅಲ್ಲಿನ ಸರ್ಕಾರ ವಿಧಿಸಿದೆ. ಪ್ರವಾಸೋದ್ಯಮ, ಹೋಟೆಲ್ ಉದ್ಯಮಗಳು ನೆಲಕಚ್ಚಿವೆ. ಇಲ್ಲಿನ ಸಿಹಿಗುಂಬಳಕ್ಕೆ ಕೇರಳದ ಹೋಟೆಲ್ ಮಾಲೀಕರೆ ಪ್ರಮುಖ ಗ್ರಾಹಕರು. ಆದರೆ, ಅಲ್ಲಿ ವಹಿವಾಟು ನೀರಸವಾಗಿರುವುದರಿಂದ ಬೇಡಿಕೆ ಇಲ್ಲವಾಗಿದೆ.</p>.<p class="Subhead">20 ದಿನ ಸಂಗ್ರಹ: ‘ಸಿಹಿಗುಂಬಳವನ್ನು ತಕ್ಷಣವೇ ರೈತರು ಕಟಾವು ಮಾಡದೇ ಕಾದು ನೋಡುವ ತಂತ್ರ ಅನುಸರಿಸಬಹುದು’ ಎಂದು ತೋಟಗಾರಿಕಾ ಇಲಾಖೆ ಮನವಿ ಮಾಡಿದೆ.</p>.<p>‘ಗಿಡದಲ್ಲೇ ಸುಮಾರು 10 ದಿನ, ಕಟಾವು ಮಾಡಿದ ನಂತರ 10 ದಿನಗಳ ಕಾಲ ಇಟ್ಟರೂ ಕೊಳೆಯು<br />ವುದಿಲ್ಲ. ಮುಂದೆ ಬೇಡಿಕೆ ಸೃಷ್ಟಿಯಾದಾಗ ಮಾರಾಟ ಮಾಡಬಹುದು. ಆದ್ದರಿಂದ ರೈತರು ತಾಳ್ಮೆಯಿಂದ ಇರಬೇಕು’ ಎಂದು ಇಲಾಖೆಯ ಉಪನಿರ್ದೇಶಕ ಕೆ.ರುದ್ರೇಶ್ ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸಿಹಿಗುಂಬಳದ ಕನಿಷ್ಠ ಧಾರಣೆ ಕೆ.ಜಿಗೆ ₹ 1 ಹಾಗೂ ಗರಿಷ್ಠ ಬೆಲೆ ₹ 3ಕ್ಕೆ ಕುಸಿದಿದ್ದು, ರೈತರಲ್ಲಿ ಭಾರಿ ನಿರಾಸೆ ತರಿಸಿದೆ.</p>.<p>ಪ್ರತಿ ದಿನ 700 ಕ್ವಿಂಟಲ್ಗೂ ಹೆಚ್ಚು ಸಿಹಿಗುಂಬಳದ ಆವಕ ನಡೆದಿದೆ. ಹಿಂದಿನ ವರ್ಷ ಎಪಿಎಂಸಿಯಲ್ಲಿ ಪ್ರತಿ ಕೆ.ಜಿಗೆ ಸಗಟು ಧಾರಣೆ ₹ 21 ಇತ್ತು.</p>.<p>ಕಳೆದ ತಿಂಗಳು ಕೆ.ಜಿಗೆ ₹ 7ರಿಂದ ₹ 9ರವರೆಗೂ ದರವಿತ್ತು. ಜುಲೈನಲ್ಲಿ ದರ ₹ 18ರವರೆಗೂ ತಲುಪಿತ್ತು. ಆದರೆ, ಸೆಪ್ಟೆಂಬರ್ ಆರಂಭದಿಂದಲೂ ಬೆಲೆ ₹ 1ರಿಂದ ₹ 3ರವರೆಗೆ ಮಾತ್ರವೇ ಎಪಿಎಂಸಿಯಲ್ಲಿ ನಿಗದಿಯಾಗುತ್ತಿದ್ದು, ರೈತರಿಗೆ ಅತೀವ ನಷ್ಟ ಉಂಟಾಗಿದೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಂಜನಗೂಡಿನ ರೈತ ಕೆಂಡಗಣ್ಣಸ್ವಾಮಿ, ‘ ಸಿಹಿಗುಂಬಳ ಖರೀದಿಸಲು ವ್ಯಾಪಾರಿಗಳು ಬರುತ್ತಿಲ್ಲ. ಮಧ್ಯವರ್ತಿಗಳು ಕರುಣೆ ಇಲ್ಲದೆ ಕಡಿಮೆ ದರ ನಿಗದಿ ಮಾಡಿದ್ದಾರೆ. ಅದರಿಂದ ನಮಗೆ ಸಾಗಾಣಿಕೆ ವೆಚ್ಚವೂ ಸಿಗುವುದಿಲ್ಲ. ಹೊಲದಲ್ಲೇ ಕುಂಬಳವನ್ನು ಬಿಡುವೆ, ಮಾರುಕಟ್ಟೆಗೆ ತರುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p class="Subhead">ದರ ಕುಸಿತ ಏಕೆ?: ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರು<br />ವುದರಿಂದ ಹೆಚ್ಚಿನ ನಿರ್ಬಂಧಗಳನ್ನು ಅಲ್ಲಿನ ಸರ್ಕಾರ ವಿಧಿಸಿದೆ. ಪ್ರವಾಸೋದ್ಯಮ, ಹೋಟೆಲ್ ಉದ್ಯಮಗಳು ನೆಲಕಚ್ಚಿವೆ. ಇಲ್ಲಿನ ಸಿಹಿಗುಂಬಳಕ್ಕೆ ಕೇರಳದ ಹೋಟೆಲ್ ಮಾಲೀಕರೆ ಪ್ರಮುಖ ಗ್ರಾಹಕರು. ಆದರೆ, ಅಲ್ಲಿ ವಹಿವಾಟು ನೀರಸವಾಗಿರುವುದರಿಂದ ಬೇಡಿಕೆ ಇಲ್ಲವಾಗಿದೆ.</p>.<p class="Subhead">20 ದಿನ ಸಂಗ್ರಹ: ‘ಸಿಹಿಗುಂಬಳವನ್ನು ತಕ್ಷಣವೇ ರೈತರು ಕಟಾವು ಮಾಡದೇ ಕಾದು ನೋಡುವ ತಂತ್ರ ಅನುಸರಿಸಬಹುದು’ ಎಂದು ತೋಟಗಾರಿಕಾ ಇಲಾಖೆ ಮನವಿ ಮಾಡಿದೆ.</p>.<p>‘ಗಿಡದಲ್ಲೇ ಸುಮಾರು 10 ದಿನ, ಕಟಾವು ಮಾಡಿದ ನಂತರ 10 ದಿನಗಳ ಕಾಲ ಇಟ್ಟರೂ ಕೊಳೆಯು<br />ವುದಿಲ್ಲ. ಮುಂದೆ ಬೇಡಿಕೆ ಸೃಷ್ಟಿಯಾದಾಗ ಮಾರಾಟ ಮಾಡಬಹುದು. ಆದ್ದರಿಂದ ರೈತರು ತಾಳ್ಮೆಯಿಂದ ಇರಬೇಕು’ ಎಂದು ಇಲಾಖೆಯ ಉಪನಿರ್ದೇಶಕ ಕೆ.ರುದ್ರೇಶ್ ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>