<p><strong>ಮಂಡ್ಯ:</strong> ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಕಾಯಿ ಕಟ್ಟಿದ ಭತ್ತಕ್ಕೆ (ವಡೆ ಭತ್ತ) ರಾಸಾಯನಿಕರ ಗೊಬ್ಬರ ಬಿತ್ತನೆ ಮಾಡುವ ಚಿತ್ರ, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ರೈತರು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದ ಅಂಗವಾಗಿ ನ.14ರಂದು ಕೆ.ಆರ್.ಪೇಟೆ ತಾಲ್ಲೂಕು ಮಡುವಿನಕೋಡಿ ಗ್ರಾಮದಲ್ಲಿ ಇಡೀ ದಿನ ಸಚಿವರು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ರಾಗಿ, ಭತ್ತದ ನಾಟಿ, ಯಾಂತ್ರೀಕೃತ ಕೃಷಿ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ರೈತರೊಂದಿಗೆ ರೈತರಾಗಿ ಅವರ ಸಮಸ್ಯೆ ಆಲಿಸಿದ್ದರು.</p>.<p>ಕೃಷಿ ಕೆಲಸ ಮಾಡುವಾಗ ಬೆಳೆದು ನಿಂತಿದ್ದ ಭತ್ತದ ಗದ್ದೆಯಲ್ಲಿ ಸಚಿವರು ರಾಸಾಯನಿಕ ಗೊಬ್ಬರ (ಉಪ್ಪು) ಬಿತ್ತನೆ ಮಾಡಿದ್ದರು. ಭತ್ತದ ಪೈರು ಕಾಯಿಕಟ್ಟಿದ್ದು ಈ ಹಂತದಲ್ಲಿ ಗೊಬ್ಬರ ಬಿತ್ತನೆ ಮಾಡಲು ಸಾಧ್ಯವೇ ಎಂದು ಸಾರ್ವಜನಿಕರು ಜಾಲತಾಣಗಳಲ್ಲಿ ಪ್ರಶ್ನೆ ಮಾಡಿದ್ದಾರೆ. ಕೃಷಿಯ ಪ್ರಾಥಮಿಕ ಜ್ಞಾನವೂ ಇಲ್ಲದ ಸಚಿವರು ಕೇವಲ ತೋರಿಕೆಗಾಗಿ ಗೊಬ್ಬರ ಬಿತ್ತನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಚರ್ಚೆಗಳು ನಡೆಯುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಕಾಯಿ ಕಟ್ಟಿದ ಭತ್ತಕ್ಕೆ (ವಡೆ ಭತ್ತ) ರಾಸಾಯನಿಕರ ಗೊಬ್ಬರ ಬಿತ್ತನೆ ಮಾಡುವ ಚಿತ್ರ, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ರೈತರು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದ ಅಂಗವಾಗಿ ನ.14ರಂದು ಕೆ.ಆರ್.ಪೇಟೆ ತಾಲ್ಲೂಕು ಮಡುವಿನಕೋಡಿ ಗ್ರಾಮದಲ್ಲಿ ಇಡೀ ದಿನ ಸಚಿವರು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ರಾಗಿ, ಭತ್ತದ ನಾಟಿ, ಯಾಂತ್ರೀಕೃತ ಕೃಷಿ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ರೈತರೊಂದಿಗೆ ರೈತರಾಗಿ ಅವರ ಸಮಸ್ಯೆ ಆಲಿಸಿದ್ದರು.</p>.<p>ಕೃಷಿ ಕೆಲಸ ಮಾಡುವಾಗ ಬೆಳೆದು ನಿಂತಿದ್ದ ಭತ್ತದ ಗದ್ದೆಯಲ್ಲಿ ಸಚಿವರು ರಾಸಾಯನಿಕ ಗೊಬ್ಬರ (ಉಪ್ಪು) ಬಿತ್ತನೆ ಮಾಡಿದ್ದರು. ಭತ್ತದ ಪೈರು ಕಾಯಿಕಟ್ಟಿದ್ದು ಈ ಹಂತದಲ್ಲಿ ಗೊಬ್ಬರ ಬಿತ್ತನೆ ಮಾಡಲು ಸಾಧ್ಯವೇ ಎಂದು ಸಾರ್ವಜನಿಕರು ಜಾಲತಾಣಗಳಲ್ಲಿ ಪ್ರಶ್ನೆ ಮಾಡಿದ್ದಾರೆ. ಕೃಷಿಯ ಪ್ರಾಥಮಿಕ ಜ್ಞಾನವೂ ಇಲ್ಲದ ಸಚಿವರು ಕೇವಲ ತೋರಿಕೆಗಾಗಿ ಗೊಬ್ಬರ ಬಿತ್ತನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಚರ್ಚೆಗಳು ನಡೆಯುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>