<p><strong>ಮೈಸೂರು: </strong>ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರದಲ್ಲಿ ಅತ್ಯಾಚಾರ ನಡೆಸಿ ಸಿಕ್ಕಿಬಿದ್ದ ಆರೋಪಿಗಳು ಎರಡು ವರ್ಷದಿಂದಲೂ ತಪ್ಪಲಿನಲ್ಲಿ ಯುವ ಜೋಡಿಗಳನ್ನು ಪೀಡಿಸಿದ್ದಾರೆ. ಅವರ ಬಳಿ ಸಿಕ್ಕಿದ್ದನ್ನೆಲ್ಲ ದೋಚಿದ್ದಾರೆ. ವಯಸ್ಸಿನ ವ್ಯತ್ಯಾಸವನ್ನೇ ನೋಡದೆ ಮಹಿಳೆಯರು, ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾರೆ ಎಂಬ ಸಂಗತಿ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/karnataka-news/mysore-rape-case-accused-molestations-habitual-offenders-862187.html" target="_blank">ಮೈಸೂರು ಅತ್ಯಾಚಾರ ಪ್ರಕರಣ: ಬಂಧಿತರ ಪೈಕಿ ಇಬ್ಬರಿಗೆ ಹೆಣ್ಣು, ಹಣದ ಚಪಲ!</a></p>.<p>ಇಂಥ ಪ್ರಕರಣಗಳಲ್ಲಿ ಎಂಥದ್ದೇ ನಷ್ಟವಾದರೂ ಮರ್ಯಾದೆಗೆ ಅಂಜಿ ಸಂತ್ರಸ್ತರು ಪೊಲೀಸರಿಗೆ ದೂರು ನೀಡದೇ ಇರುವುದನ್ನೇ ಆರೋಪಿಗಳು ಅವಕಾಶವನ್ನಾಗಿಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಆಗಿಂದ್ದಾಗ್ಗೆ ನಗರಕ್ಕೆ ಬಂದು ದೌರ್ಜನ್ಯ–ದರೋಡೆ ನಡೆಸುತ್ತಿದ್ದರು. ಪ್ರತಿ ಬಾರಿ ಅಂಥ ಕೃತ್ಯ ನಡೆಸಿದ ನಂತರ ಕೆಲವು ವಾರಗಳವರೆಗೆ ಅವರು ಮೈಸೂರಿಗೆ ಬರುತ್ತಿರಲಿಲ್ಲ.</p>.<p><strong>ಇದನ್ನೂ ಓದಿ:</strong><a href="https://www.prajavani.net/district/tumakuru/gang-rape-and-murder-in-tumkur-no-hint-of-rapists-for-weeks-862126.html" target="_blank">ತುಮಕೂರು| ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ: ವಾರವಾದರೂ ಆರೋಪಿಗಳ ಸುಳಿವಿಲ್ಲ</a></p>.<p>’ತಮಿಳುನಾಡಿನ ಸತ್ಯಮಂಗಲ ಜಿಲ್ಲೆಯ ತಿರುಪ್ಪುರ್ ಹಾಗೂ ಸುತ್ತಮುತ್ತಲ ಪಟ್ಟಣಗಳ ನಿವಾಸಿಗಳಾದ ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆದ ದಿನ ಬಾಳೆಕಾಯಿಯನ್ನು ಸರಕುಸಾಗಣೆ ವಾಹನದಲ್ಲಿ ತುಂಬಿಕೊಂಡು ಎಪಿಎಂಸಿಗೆ ಬಂದಿದ್ದರು. ಬಾಳೆಕಾಯಿ ಮಾರಾಟ ಮಾಡಿ, ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಸುತ್ತಾಟ ನಡೆಸಿ ಮದ್ಯ ಸೇವಿಸಿ ಕುಳಿತಿದ್ದರು. ಆ ಸಂಧರ್ಭದಲ್ಲಿ ಸಂತ್ರಸ್ತೆ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ಬರುತ್ತಿರುವುದನ್ನು ಕಂಡು ದೌರ್ಜನ್ಯ ಎಸಗಿದ್ದರು. ಹಣ ಸಿಗದೇ ಇದ್ದಾಗ ಯುವತಿಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದರು’ ಎಂಬುದು ಪ್ರಾಥಮಿಕ ಹಂತದ ವಿಚಾರಣೆಯಿಂದ ತಿಳಿದು ಬಂದಿದೆ.</p>.<p><strong>ಇದನ್ನೂಓದಿ:</strong><a href="https://www.prajavani.net/karnataka-news/mysuru-sexual-assault-case-kannada-actor-jaggesh-karnataka-state-police-861725.html" target="_blank">ಮೈಸೂರು ಅತ್ಯಾಚಾರ ಪ್ರಕರಣ: ಪೊಲೀಸರಿಗೆ ₹1 ಲಕ್ಷ ಬಹುಮಾನ ಘೋಷಿಸಿದ ನಟ ಜಗ್ಗೇಶ್</a></p>.<p><strong>ಕಾರ್ಯಾಚರಣೆ ಹೀಗಿತ್ತು...</strong></p>.<p>ಆರೋಪಿಗಳು ತಮಿಳಿನಲ್ಲಿ ಮಾತನಾಡುತ್ತಿದ್ದರು ಎಂದು ಸಂತ್ರಸ್ತೆ ಸ್ನೇಹಿತ ನೀಡಿದ ಸುಳಿವನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರ ತಂಡವು, ತಮಿಳುನಾಡಿನ ಸಿಮ್ ಹೊಂದಿರುವ ಮೊಬೈಲ್ ಲೊಕೇಶನ್ ಅನ್ನು ಪತ್ತೆ ಹಚ್ಚಿತ್ತು.</p>.<p>ಘಟನೆ ಸ್ಥಳದಲ್ಲಿ ಪತ್ತೆಯಾದ ಮೊಬೈಲ್ ಲೊಕೇಶನ್ ನಂತರ ಚಾಮರಾಜನಗರಲ್ಲಿ, ಮತ್ತೆ ತಮಿಳುನಾಡಿನಲ್ಲಿಯೂ ಸಿಕ್ಕಿತ್ತು. ಅದನ್ನು ಆಧರಿಸಿಯೇ ಶುಕ್ರವಾರ ಮಧ್ಯಾಹ್ನ ಹೊರಟ ತನಿಖಾ ತಂಡವು ಮಧ್ಯರಾತ್ರಿ 12.30ರ ವೇಳೆಗೆ ತಮಿಳುನಾಡು ತಲುಪಿತ್ತು. ಶನಿವಾರ ಬೆಳಗಿನ ಜಾವ ಆರು ಗಂಟೆಯವರೆಗೂ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳು ತಮ್ಮ ಮನೆಗಳಲ್ಲಿಯೇ ಸಿಕ್ಕಿಬಿದ್ದರು. ಇಬ್ಬರು ಮಾತ್ರ ಸ್ನೇಹಿತರ ಜತೆಗಿದ್ದರು’ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p><strong>ಓದಿ:</strong><a href="https://www.prajavani.net/karnataka-news/home-minister-araga-jnanendra-reaction-about-mysuru-sexual-assault-case-861678.html" target="_blank">ಮೈಸೂರಿನ ಅತ್ಯಾಚಾರ ಪ್ರಕರಣ ಬೇಧಿಸಿದ ಪೊಲೀಸರಿಗೆ ₹ 5 ಲಕ್ಷ ಬಹುಮಾನ: ಜ್ಞಾನೇಂದ್ರ</a></p>.<p>‘ತಾಳವಾಡಿಯಲ್ಲಿ ಕೊನೆ ಹಂತದ ಕಾರ್ಯಾಚರಣೆ ನಡೆಸುವಾಗ ಆರೋಪಿಯೊಬ್ಬ ಪರಾರಿಯಾದ. ಕೃತ್ಯ ಎಸಗಿರುವುದಾಗಿ ಆರೋಪಿಗಳೆಲ್ಲರೂ ಒಪ್ಪಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರದಲ್ಲಿ ಅತ್ಯಾಚಾರ ನಡೆಸಿ ಸಿಕ್ಕಿಬಿದ್ದ ಆರೋಪಿಗಳು ಎರಡು ವರ್ಷದಿಂದಲೂ ತಪ್ಪಲಿನಲ್ಲಿ ಯುವ ಜೋಡಿಗಳನ್ನು ಪೀಡಿಸಿದ್ದಾರೆ. ಅವರ ಬಳಿ ಸಿಕ್ಕಿದ್ದನ್ನೆಲ್ಲ ದೋಚಿದ್ದಾರೆ. ವಯಸ್ಸಿನ ವ್ಯತ್ಯಾಸವನ್ನೇ ನೋಡದೆ ಮಹಿಳೆಯರು, ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾರೆ ಎಂಬ ಸಂಗತಿ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/karnataka-news/mysore-rape-case-accused-molestations-habitual-offenders-862187.html" target="_blank">ಮೈಸೂರು ಅತ್ಯಾಚಾರ ಪ್ರಕರಣ: ಬಂಧಿತರ ಪೈಕಿ ಇಬ್ಬರಿಗೆ ಹೆಣ್ಣು, ಹಣದ ಚಪಲ!</a></p>.<p>ಇಂಥ ಪ್ರಕರಣಗಳಲ್ಲಿ ಎಂಥದ್ದೇ ನಷ್ಟವಾದರೂ ಮರ್ಯಾದೆಗೆ ಅಂಜಿ ಸಂತ್ರಸ್ತರು ಪೊಲೀಸರಿಗೆ ದೂರು ನೀಡದೇ ಇರುವುದನ್ನೇ ಆರೋಪಿಗಳು ಅವಕಾಶವನ್ನಾಗಿಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಆಗಿಂದ್ದಾಗ್ಗೆ ನಗರಕ್ಕೆ ಬಂದು ದೌರ್ಜನ್ಯ–ದರೋಡೆ ನಡೆಸುತ್ತಿದ್ದರು. ಪ್ರತಿ ಬಾರಿ ಅಂಥ ಕೃತ್ಯ ನಡೆಸಿದ ನಂತರ ಕೆಲವು ವಾರಗಳವರೆಗೆ ಅವರು ಮೈಸೂರಿಗೆ ಬರುತ್ತಿರಲಿಲ್ಲ.</p>.<p><strong>ಇದನ್ನೂ ಓದಿ:</strong><a href="https://www.prajavani.net/district/tumakuru/gang-rape-and-murder-in-tumkur-no-hint-of-rapists-for-weeks-862126.html" target="_blank">ತುಮಕೂರು| ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ: ವಾರವಾದರೂ ಆರೋಪಿಗಳ ಸುಳಿವಿಲ್ಲ</a></p>.<p>’ತಮಿಳುನಾಡಿನ ಸತ್ಯಮಂಗಲ ಜಿಲ್ಲೆಯ ತಿರುಪ್ಪುರ್ ಹಾಗೂ ಸುತ್ತಮುತ್ತಲ ಪಟ್ಟಣಗಳ ನಿವಾಸಿಗಳಾದ ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆದ ದಿನ ಬಾಳೆಕಾಯಿಯನ್ನು ಸರಕುಸಾಗಣೆ ವಾಹನದಲ್ಲಿ ತುಂಬಿಕೊಂಡು ಎಪಿಎಂಸಿಗೆ ಬಂದಿದ್ದರು. ಬಾಳೆಕಾಯಿ ಮಾರಾಟ ಮಾಡಿ, ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಸುತ್ತಾಟ ನಡೆಸಿ ಮದ್ಯ ಸೇವಿಸಿ ಕುಳಿತಿದ್ದರು. ಆ ಸಂಧರ್ಭದಲ್ಲಿ ಸಂತ್ರಸ್ತೆ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ಬರುತ್ತಿರುವುದನ್ನು ಕಂಡು ದೌರ್ಜನ್ಯ ಎಸಗಿದ್ದರು. ಹಣ ಸಿಗದೇ ಇದ್ದಾಗ ಯುವತಿಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದರು’ ಎಂಬುದು ಪ್ರಾಥಮಿಕ ಹಂತದ ವಿಚಾರಣೆಯಿಂದ ತಿಳಿದು ಬಂದಿದೆ.</p>.<p><strong>ಇದನ್ನೂಓದಿ:</strong><a href="https://www.prajavani.net/karnataka-news/mysuru-sexual-assault-case-kannada-actor-jaggesh-karnataka-state-police-861725.html" target="_blank">ಮೈಸೂರು ಅತ್ಯಾಚಾರ ಪ್ರಕರಣ: ಪೊಲೀಸರಿಗೆ ₹1 ಲಕ್ಷ ಬಹುಮಾನ ಘೋಷಿಸಿದ ನಟ ಜಗ್ಗೇಶ್</a></p>.<p><strong>ಕಾರ್ಯಾಚರಣೆ ಹೀಗಿತ್ತು...</strong></p>.<p>ಆರೋಪಿಗಳು ತಮಿಳಿನಲ್ಲಿ ಮಾತನಾಡುತ್ತಿದ್ದರು ಎಂದು ಸಂತ್ರಸ್ತೆ ಸ್ನೇಹಿತ ನೀಡಿದ ಸುಳಿವನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರ ತಂಡವು, ತಮಿಳುನಾಡಿನ ಸಿಮ್ ಹೊಂದಿರುವ ಮೊಬೈಲ್ ಲೊಕೇಶನ್ ಅನ್ನು ಪತ್ತೆ ಹಚ್ಚಿತ್ತು.</p>.<p>ಘಟನೆ ಸ್ಥಳದಲ್ಲಿ ಪತ್ತೆಯಾದ ಮೊಬೈಲ್ ಲೊಕೇಶನ್ ನಂತರ ಚಾಮರಾಜನಗರಲ್ಲಿ, ಮತ್ತೆ ತಮಿಳುನಾಡಿನಲ್ಲಿಯೂ ಸಿಕ್ಕಿತ್ತು. ಅದನ್ನು ಆಧರಿಸಿಯೇ ಶುಕ್ರವಾರ ಮಧ್ಯಾಹ್ನ ಹೊರಟ ತನಿಖಾ ತಂಡವು ಮಧ್ಯರಾತ್ರಿ 12.30ರ ವೇಳೆಗೆ ತಮಿಳುನಾಡು ತಲುಪಿತ್ತು. ಶನಿವಾರ ಬೆಳಗಿನ ಜಾವ ಆರು ಗಂಟೆಯವರೆಗೂ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳು ತಮ್ಮ ಮನೆಗಳಲ್ಲಿಯೇ ಸಿಕ್ಕಿಬಿದ್ದರು. ಇಬ್ಬರು ಮಾತ್ರ ಸ್ನೇಹಿತರ ಜತೆಗಿದ್ದರು’ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p><strong>ಓದಿ:</strong><a href="https://www.prajavani.net/karnataka-news/home-minister-araga-jnanendra-reaction-about-mysuru-sexual-assault-case-861678.html" target="_blank">ಮೈಸೂರಿನ ಅತ್ಯಾಚಾರ ಪ್ರಕರಣ ಬೇಧಿಸಿದ ಪೊಲೀಸರಿಗೆ ₹ 5 ಲಕ್ಷ ಬಹುಮಾನ: ಜ್ಞಾನೇಂದ್ರ</a></p>.<p>‘ತಾಳವಾಡಿಯಲ್ಲಿ ಕೊನೆ ಹಂತದ ಕಾರ್ಯಾಚರಣೆ ನಡೆಸುವಾಗ ಆರೋಪಿಯೊಬ್ಬ ಪರಾರಿಯಾದ. ಕೃತ್ಯ ಎಸಗಿರುವುದಾಗಿ ಆರೋಪಿಗಳೆಲ್ಲರೂ ಒಪ್ಪಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>