‘ಈ ಹಿಂದೆ ಮಾನವ ಸಂಪನ್ಮೂಲ ಸಚಿವರಾಗಿದ್ದ ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್ ಹಾಗೂ ಈಗ ಸಚಿವರಾಗಿರುವ ರಮೇಶ್ ಪೋಖ್ರಿಯಾಲ್ ಅವರಿಗೆ ಮನವಿ ಸಲ್ಲಿಸಿದ್ದು, ಕನ್ನಡಕ್ಕೆ ಸ್ವಾಯತ್ತ ಸ್ಥಾನಮಾನ ನೀಡಬೇಕು ಎಂದು ರಾಜ್ಯ ನಿಯೋಗದ ಮೂಲಕ ಪ್ರಸ್ತಾವ ಸಲ್ಲಿಸಿದ್ದೇನೆ. ಈ ಪ್ರಸ್ತಾವವನ್ನು ಮೂವರು ಸಚಿವರು ಒಪ್ಪಿದ್ದು, ಸ್ವಾಯತ್ತ ಸ್ಥಾನ–ಮಾನ ಕೊಡುವುದಾಗಿ ಖಚಿತ ಭರವಸೆ ನೀಡಿದ್ದರು. ಆದರೆ, ಈವರೆಗೂ ಈ ಸ್ಥಾನ–ಮಾನ ನೀಡಿಲ್ಲ’ ಎಂದೂ ಹನುಮಂತಯ್ಯ ಹೇಳಿದರು.