ಈ ಕುರಿತು 2ನಿಮಿಷ 43 ಸೆಕೆಂಡುಗಳ ವಿಡಿಯೊ ಒಂದನ್ನು ಅವರು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದಾರೆ. ಗಣೇಶ ಚತುರ್ಥಿಯ ಶುಭ ದಿನದಂದೇ ತನ್ನೀ ಹೊಸ ಬ್ಯಾಂಕಿನ ರೂಪುರೇಷೆಗಳನ್ನು ಭಕ್ತರ ಮುಂದೆ ಇಡುವುದಾಗಿ ಘೋಷಣೆ ಮಾಡಿದ್ದಾರೆ. ‘ರಿಸರ್ವ್ ಬ್ಯಾಂಕ್ ಆಫ್ ಕೈಲಾಸ’ ಎಂಬ ಹೆಸರಿನ ಬ್ಯಾಂಕ್ ಇದಾಗಲಿದ್ದು, ವ್ಯಾಟಿಕನ್ ಬ್ಯಾಂಕ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ದೇಶದ ಆರ್ಥಿಕತೆ ನಿರ್ವಹಣೆಗೆ ಅಡಿಪಾಯ ಹಾಕಲಿದೆ. ಅದಕ್ಕಾಗಿ ಸುಮಾರು 300 ಪುಟದಷ್ಟು ದಾಖಲೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.