ನೆರೆ ಹಾವಳಿಯಿಂದ ನೆರೆ-ಹೊರೆಯವರನ್ನು ಕಳೆದುಕೊಂಡು ಕಂಗಾಲಾದ ನಿರಾಶ್ರಿತರಿಗೆ ಸರ್ಕಾರ ಕಲ್ಪಿಸುವ ಮೂಲ ಸೌಕರ್ಯಗಳು ತಾತ್ಕಾಲಿಕ. ಅದಕ್ಕೆ ಶಾಶ್ವತವಾಗಿ ಪರಿಹಾರ ನೀಡಬೇಕು. ನಿರಾಶ್ರಿತರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಒಂದು ಕಡೆ ನೆಲೆಯೂರಿ ನಿಂತಾಗ ಮಾತ್ರ ಜೀವನ ನಡೆಸಲು ಸಾಧ್ಯ. ನೆರೆ ಹಾವಳಿ ಎನ್ನುವುದು ಆಕಸ್ಮಿಕವೇ ಆದರೂ ಅದರ ಪರಿಣಾಮ ಭೀಕರ. ಇದರಿಂದ ನಷ್ಟದ ಪ್ರಮಾಣ ಅಧಿಕವಾಗಿದ್ದು ಸಾವು-ನೋವುಗಳು ಸಂಭವಿಸುವುದರಿಂದ ಸರ್ಕಾರವೂ ಶಾಶ್ವತ ಪರಿಹಾರ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.