‘ತಂದೆ ತೀರಿಕೊಂಡ ಬಳಿಕ ಆರು ತಿಂಗಳವರೆಗೆ ನಮ್ಮ ಕುಟುಂಬ ಬಹಳ ಸಂಕಷ್ಟ ಎದುರಿಸಬೇಕಾಯಿತು. ಸ್ನೇಹಿತರು, ಬಂಧುಗಳು, ಪರಿಚಯದವರೂ ದೂರವಾದರು. ದಿನಸಿ ಅಂಗಡಿಯವರು ಕೂಡ ಸಾಮಗ್ರಿ ಕೊಡಲಿಲ್ಲ. ನಮ್ಮನ್ನು ನೋಡಿದರೆ ಸಾಕು; ಬಾಗಿಲು ಹಾಕಿಕೊಳ್ಳುತ್ತಿದ್ದರು. ಆದರೂ ಎಲ್ಲವನ್ನೂ ಸಹಿಸಿಕೊಂಡೆವು. ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿದೆವು. ಮಕ್ಕಳು, ಮಹಿಳೆಯರು, ಪುರುಷರು ಮೂರು ತಿಂಗಳು ಮನೆಯಲ್ಲೇ ಬಂದಿಯಾದೆವು’ ಎಂದು ನೊಂದು ನುಡಿದರು.