‘ನಮ್ಮೂರಿನಲ್ಲಿ ಇನ್ನೊಬ್ಬ ರೈತರು ಈರುಳ್ಳಿ ಬೆಳೆದಿದ್ದು, ಅವರದ್ದೂ ಇದೇ ಪರಿಸ್ಥಿತಿ ಆಗಿದೆ. ಲಾಕ್ಡೌನ್ ಇಲ್ಲದಿದ್ದರೆ, ಮಳೆಗೆ ಗೆಡ್ಡೆ ಕೊಳೆಯದಿದ್ದರೆ, ಬೆಂಗಳೂರಿಗೆ ಒಯ್ದು ಅಸಲನ್ನಾದರೂ ಪಡೆಯುತ್ತಿದ್ದೆ. ಕೊರೊನಾ ಮತ್ತು ಮಳೆ ನನ್ನ ಬದುಕನ್ನು ಕಿತ್ತುಕೊಂಡಿವೆ. ನನ್ನ ಮಕ್ಕಳಿಬ್ಬರು ಡಾಬಾ ನಡೆಸುತ್ತಿದ್ದಾರೆ. ಹಿಂದಿನ ವರ್ಷ ಐದಾರು ತಿಂಗಳು ಡಾಬಾ ಬಂದ್ ಮಾಡಿದ್ದರು. ಈ ವರ್ಷ ಯುಗಾದಿಯಿಂದ ಬಂದ್ ಮಾಡಿದ್ದಾರೆ. ಅವರೂ ಕಷ್ಟಕ್ಕೆ ಸಿಲುಕಿದ್ದಾರೆ. ಬದುಕಿನ ಬಂಡಿ ಸಾಗಿಸಲು ನೀವು ನೆರವಿಗೆ ಬರಬೇಕು’ ಎಂದು ಮನವಿ ಮಾಡಿದ್ದಾರೆ.