<p><strong>ಬೆಂಗಳೂರು:</strong>‘ನೀವು (ಕುರಿ ಮಾಂಸ) ಒಂದು ಪೀಸ್ ತಿನ್ನಿ ಅದರ ರುಚಿ ಗೊತ್ತಾಗುತ್ತದೆ’.</p>.<p>–ಹೀಗೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಿಚಾಯಿಸುವಂತೆ ಸಲಹೆ ನೀಡಿದ್ದು, ಕಾಂಗ್ರೆಸ್ನ ಕೆ.ಆರ್.ರಮೇಶ್ಕುಮಾರ್.</p>.<p>ಬಿಜೆಪಿಯ ಪೂರ್ಣಿಮಾ ಅವರು ಗಮನಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದ ವಿಷಯ ಕುರಿತು ಮಾತನಾಡಿದ ರಮೇಶ್ಕುಮಾರ್ ಅವರು ಕುರಿ ಸಾಕಣೆದಾರರ ಸಮಸ್ಯೆಗಳನ್ನು ಮನ ಮುಟ್ಟುವಂತೆ ವಿವರಿಸುತ್ತಿದ್ದರು.</p>.<p>ಆಗ ಕಾಗೇರಿಯವರು ಹಾಸ್ಯವಾಗಿ, ‘ನೀವು ಆ ಕಡೆ ಹೇಗೆ(ಕುರಿ ಸಾಕಣೆ) ಹೋದಿರಿ’ ಎಂದು ಪ್ರಶ್ನಿಸಿದರು. ‘ನೀವು ಸಂಘದ ಕಡೆ ಹೋದ್ರಿ, ನಾ ಆ ಕಡೆ ಹೋದೆ’ ಎಂದರು ರಮೇಶ್ಕುಮಾರ್.</p>.<p>‘ಸಿದ್ದರಾಮಯ್ಯ ಏನಾದ್ರೂ ಪ್ರಭಾವ ಬೀರಿರಬಹುದೇ’ ಎಂದು ಕಾಗೇರಿ ಮರು ಪ್ರಶ್ನೆ ಹಾಕಿದರು. ‘ಹಾಗೇನೂ ಇಲ್ಲ. ಆದರೆ, ನಮ್ಮನ್ನೆಲ್ಲ ಕಾಯಲು ಸಿದ್ದರಾಮಯ್ಯ ಅವರನ್ನು ನಾಯಕರನ್ನಾಗಿ ಮಾಡಿದ್ದೇವೆ’ ಎಂದು ರಮೇಶ್ಕುಮಾರ್ ಹೇಳಿದರು.</p>.<p>‘ನಾನು ಕುರಿ ಸಾಕುತ್ತಿದ್ದೇನೆ. ಅದರ ಸಮಸ್ಯೆಗಳು ಗೊತ್ತಿದೆ. ಕುರಿಯನ್ನು ಸಾಕಿ ಮಾರಲು ಹೋದರೆ ಮಧ್ಯವರ್ತಿಗಳು ಸೇರಿ ಕಡಿಮೆ ಬೆಲೆಗೆ ಕೊಳ್ಳುತ್ತಾರೆ. ಬಿ.ಎ, ಬಿಕಾಂ ಆದವರೂ ಕುರಿ ಸಾಕಣೆ ಮಾಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.</p>.<p>‘ನೀವು ಕುರಿ ತಿನ್ನುವವರೂ ಅಲ್ಲ, ಕುರಿ ಕಾಯುವವರೂ ಅಲ್ಲ. ನಿಮಗೆ ಇಷ್ಟೊಂದು ಕುತೂಹಲವೇಕೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕಾಗೇರಿಯವರ ಕಾಲೆಳೆದರು.</p>.<p>‘ಗೋಹತ್ಯೆ ನಿಷೇಧವಾದ ನಂತರ ಕುರಿ, ಆಡುಗಳಿಗೆ ಬೆಲೆ ಹೆಚ್ಚಾಗಿದೆ. ಈ ಹಂತದಲ್ಲಿ ಆಕಸ್ಮಿಕವಾಗಿ ಕುರಿ, ಮೇಕೆಗಳು ಸತ್ತರೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ನೀಡುವ ಯೋಜನೆ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ವಾಸ್ತವ ಸಂಗತಿ ಏನು’ ಎಂದು ಜೆಡಿಎಸ್ನ ಶಿವಲಿಂಗೇಗೌಡ ಅವರು ಪ್ರಶ್ನಿಸಿದರು.</p>.<p>ಬಿಜೆಪಿಯ ಪೂರ್ಣಿಮಾ ಮಾತನಾಡಿ, ‘ಕುರಿಗಳು ಮತ್ತು ಮೇಕೆಗಳು ಆಕಸ್ಮಿಕವಾಗಿ ಸತ್ತರೆ ಕುರಿಗಾಹಿಗಳಿಗೆ ಅನುಗ್ರಹ ಯೋಜನೆಯಡಿ ಪರಿಹಾರ ನೀಡಬೇಕು. ಈಗ ಪರಿಹಾರ ನೀಡುತ್ತಿಲ್ಲ. ಇದಕ್ಕೆ ಕೋವಿಡ್ ಆರ್ಥಿಕ ಸಂಕಷ್ಟ ಎಂದು ಹೇಳಲಾಗುತ್ತಿದೆ. ಪರಿಹಾರ ಕೊಡಲು ಮುಖ್ಯಮಂತ್ರಿಯವರು ಒಪ್ಪಿದ್ದಾರೆ. ಅಧಿಕಾರಿಗಳು ನೀಡುತ್ತಿಲ್ಲ’ ಎಂದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್, ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>‘ನೀವು (ಕುರಿ ಮಾಂಸ) ಒಂದು ಪೀಸ್ ತಿನ್ನಿ ಅದರ ರುಚಿ ಗೊತ್ತಾಗುತ್ತದೆ’.</p>.<p>–ಹೀಗೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಿಚಾಯಿಸುವಂತೆ ಸಲಹೆ ನೀಡಿದ್ದು, ಕಾಂಗ್ರೆಸ್ನ ಕೆ.ಆರ್.ರಮೇಶ್ಕುಮಾರ್.</p>.<p>ಬಿಜೆಪಿಯ ಪೂರ್ಣಿಮಾ ಅವರು ಗಮನಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದ ವಿಷಯ ಕುರಿತು ಮಾತನಾಡಿದ ರಮೇಶ್ಕುಮಾರ್ ಅವರು ಕುರಿ ಸಾಕಣೆದಾರರ ಸಮಸ್ಯೆಗಳನ್ನು ಮನ ಮುಟ್ಟುವಂತೆ ವಿವರಿಸುತ್ತಿದ್ದರು.</p>.<p>ಆಗ ಕಾಗೇರಿಯವರು ಹಾಸ್ಯವಾಗಿ, ‘ನೀವು ಆ ಕಡೆ ಹೇಗೆ(ಕುರಿ ಸಾಕಣೆ) ಹೋದಿರಿ’ ಎಂದು ಪ್ರಶ್ನಿಸಿದರು. ‘ನೀವು ಸಂಘದ ಕಡೆ ಹೋದ್ರಿ, ನಾ ಆ ಕಡೆ ಹೋದೆ’ ಎಂದರು ರಮೇಶ್ಕುಮಾರ್.</p>.<p>‘ಸಿದ್ದರಾಮಯ್ಯ ಏನಾದ್ರೂ ಪ್ರಭಾವ ಬೀರಿರಬಹುದೇ’ ಎಂದು ಕಾಗೇರಿ ಮರು ಪ್ರಶ್ನೆ ಹಾಕಿದರು. ‘ಹಾಗೇನೂ ಇಲ್ಲ. ಆದರೆ, ನಮ್ಮನ್ನೆಲ್ಲ ಕಾಯಲು ಸಿದ್ದರಾಮಯ್ಯ ಅವರನ್ನು ನಾಯಕರನ್ನಾಗಿ ಮಾಡಿದ್ದೇವೆ’ ಎಂದು ರಮೇಶ್ಕುಮಾರ್ ಹೇಳಿದರು.</p>.<p>‘ನಾನು ಕುರಿ ಸಾಕುತ್ತಿದ್ದೇನೆ. ಅದರ ಸಮಸ್ಯೆಗಳು ಗೊತ್ತಿದೆ. ಕುರಿಯನ್ನು ಸಾಕಿ ಮಾರಲು ಹೋದರೆ ಮಧ್ಯವರ್ತಿಗಳು ಸೇರಿ ಕಡಿಮೆ ಬೆಲೆಗೆ ಕೊಳ್ಳುತ್ತಾರೆ. ಬಿ.ಎ, ಬಿಕಾಂ ಆದವರೂ ಕುರಿ ಸಾಕಣೆ ಮಾಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.</p>.<p>‘ನೀವು ಕುರಿ ತಿನ್ನುವವರೂ ಅಲ್ಲ, ಕುರಿ ಕಾಯುವವರೂ ಅಲ್ಲ. ನಿಮಗೆ ಇಷ್ಟೊಂದು ಕುತೂಹಲವೇಕೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕಾಗೇರಿಯವರ ಕಾಲೆಳೆದರು.</p>.<p>‘ಗೋಹತ್ಯೆ ನಿಷೇಧವಾದ ನಂತರ ಕುರಿ, ಆಡುಗಳಿಗೆ ಬೆಲೆ ಹೆಚ್ಚಾಗಿದೆ. ಈ ಹಂತದಲ್ಲಿ ಆಕಸ್ಮಿಕವಾಗಿ ಕುರಿ, ಮೇಕೆಗಳು ಸತ್ತರೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ನೀಡುವ ಯೋಜನೆ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ವಾಸ್ತವ ಸಂಗತಿ ಏನು’ ಎಂದು ಜೆಡಿಎಸ್ನ ಶಿವಲಿಂಗೇಗೌಡ ಅವರು ಪ್ರಶ್ನಿಸಿದರು.</p>.<p>ಬಿಜೆಪಿಯ ಪೂರ್ಣಿಮಾ ಮಾತನಾಡಿ, ‘ಕುರಿಗಳು ಮತ್ತು ಮೇಕೆಗಳು ಆಕಸ್ಮಿಕವಾಗಿ ಸತ್ತರೆ ಕುರಿಗಾಹಿಗಳಿಗೆ ಅನುಗ್ರಹ ಯೋಜನೆಯಡಿ ಪರಿಹಾರ ನೀಡಬೇಕು. ಈಗ ಪರಿಹಾರ ನೀಡುತ್ತಿಲ್ಲ. ಇದಕ್ಕೆ ಕೋವಿಡ್ ಆರ್ಥಿಕ ಸಂಕಷ್ಟ ಎಂದು ಹೇಳಲಾಗುತ್ತಿದೆ. ಪರಿಹಾರ ಕೊಡಲು ಮುಖ್ಯಮಂತ್ರಿಯವರು ಒಪ್ಪಿದ್ದಾರೆ. ಅಧಿಕಾರಿಗಳು ನೀಡುತ್ತಿಲ್ಲ’ ಎಂದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್, ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>