‘ಗೋಹತ್ಯೆ ನಿಷೇಧವಾದ ನಂತರ ಕುರಿ, ಆಡುಗಳಿಗೆ ಬೆಲೆ ಹೆಚ್ಚಾಗಿದೆ. ಈ ಹಂತದಲ್ಲಿ ಆಕಸ್ಮಿಕವಾಗಿ ಕುರಿ, ಮೇಕೆಗಳು ಸತ್ತರೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ನೀಡುವ ಯೋಜನೆ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ವಾಸ್ತವ ಸಂಗತಿ ಏನು’ ಎಂದು ಜೆಡಿಎಸ್ನ ಶಿವಲಿಂಗೇಗೌಡ ಅವರು ಪ್ರಶ್ನಿಸಿದರು.