‘ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ನಾಮ ನಿರ್ದೇಶಿತ ಸದಸ್ಯರನ್ನೇ ಸಹಕಾರ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಡುತ್ತಿದೆ’ ಎಂದು ಮರಿತಿಬ್ಬೇಗೌಡ ದೂರಿದರು. ಆರೋಪ ಅಲ್ಲಗಳೆದ ಸಚಿವರು, ‘ಅಂತಹ ಪ್ರಯತ್ನ ಸರ್ಕಾರದಿಂದ ನಡೆದಿಲ್ಲ. ಆಯಾ ಸಹಕಾರ ಸಂಸ್ಥೆಗಳ ನಿರ್ದೇಶಕರೇ ಪದಾಧಿಕಾರಿಗಳನ್ನು ಚುನಾಯಿಸುತ್ತಾರೆ. ಮಂಡ್ಯ ಮತ್ತು ಕಲಬುರ್ಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳಲ್ಲಿ ನಾಮ ನಿರ್ದೇಶಿತ ಸದಸ್ಯರು ಅಧ್ಯಕ್ಷರಾಗಿದ್ದು, ಅದು ಆ ಸಂಸ್ಥೆಗಳ ನಿರ್ದೇಶಕರೇ ಕೈಗೊಂಡ ನಿರ್ಧಾರ’ ಎಂದು ಉತ್ತರಿಸಿದರು.