ಭಯದಿಂದ ತಿದ್ದುಪಡಿ: ‘ಬಂಧನ ಭೀತಿಯಿಂದ ಕೆಲವರು, ತಮ್ಮ ಬಳಿ ಇರುವ ಕಾರ್ಬನ್ ಪ್ರತಿಯನ್ನು ಅಸಲಿ ಪ್ರತಿ ರೀತಿಯಲ್ಲೇ ತಿದ್ದುಪಡಿ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಂಥ ಕಾರ್ಬನ್ ಪ್ರತಿಗಳನ್ನೇ ಕೆಲವರು ವಿಚಾರಣೆ ವೇಳೆ ಹಾಜರುಪಡಿಸಿದ್ದಾರೆ. ಪರಿಶೀಲನೆ ವೇಳೆ ಉತ್ತರ ಗುರುತುಗಳಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಇದು ಸಾಕ್ಷ್ಯ ನಾಶದ ಕೃತ್ಯವಾಗುತ್ತದೆ’ ಎಂದೂ ಮೂಲಗಳು ಹೇಳಿವೆ.