ಕಲಬುರ್ಗಿ: ನಗರ ಸೇರಿದಂತೆ ಜಿಲ್ಲೆಯ ಸೇಡಂ, ಚಿತ್ತಾಪುರ ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಆರಂಭವಾದ ಮಳೆಯು ಭಾನುವಾರ ಬೆಳಿಗ್ಗೆವರೆಗೆ ಸುರಿಯಿತು.
ಚಿಂಚೋಳಿ ತಾಲ್ಲೂಕಿನ ಕುಂಚಾವರಂನ ಸುತ್ತಮುತ್ತ ಅತಿ ಹೆಚ್ಚು 50 ಮಿ.ಮೀ. ಮಳೆ ಮತ್ತು ಯಡ್ರಾಮಿಯಲ್ಲಿ ಅತಿ ಕಡಿಮೆ 4.4 ಮಿ.ಮೀ. ಮಳೆಯಾಯಿತು.
ಸೇಡಂನಿಂದ ಊಡಗಿ ಗ್ರಾಮದಿಂದ ಹಂಗನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಊಡಗಿ–ಹಂಗನಳ್ಳಿ ರಸ್ತೆ ಸಂಪರ್ಕ ಕಡಿತವಾಗಿದೆ.
ಬೀದರ್ ಜಿಲ್ಲೆಯ ವಿವಿಧೆಡೆ ಭಾನುವಾರ ಸಾಧಾರಣ ಮಳೆಯಾಯಿತು. ಚಿಟಗುಪ್ಪ ತಾಲ್ಲೂಕಿನಲ್ಲಿ ಹೊಲಗಳಲ್ಲಿ ನೀರು ನುಗ್ಗಿದೆ. ಬೀದರ್ ನಗರ, ಮಾಳೆಗಾಂವ, ಜನವಾಡ, ಮರಕಲ್, ಭಾಲ್ಕಿ, ಔರಾದ್ ಹಾಗೂ ಬಸವಕಲ್ಯಾಣದಲ್ಲಿ ಸಾಧಾರಣ ಮಳೆಯಾಯಿತು.