ಎಐಸಿಸಿ ಭಾನುವಾರ ಪ್ರಕಟಿಸಿದ ಪಟ್ಟಿಯಲ್ಲಿ ರಾಜ್ಯದಿಂದ ಜೈರಾಂ ರಮೇಶ್ ಅವರನ್ನು ಮಾತ್ರ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿರುವ ಕಾಂಗ್ರೆಸ್ ನಾಯಕರು, ಮನ್ಸೂರ್ ಅವರಿಗೂ ಸೋಮವಾರ 'ಬಿ' ಫಾರ್ಮ್ ವಿತರಿಸಿದರು. ಜೈರಾಂ ರಮೇಶ್ ಕೂಡ ಇದೇ ಸಂದರ್ಭದಲ್ಲಿ ಪಕ್ಷದ 'ಬಿ' ಫಾರ್ಮ್ ಸ್ವೀಕರಿಸಿದರು.