‘ವಿಶ್ವನಾಥ್ ಹಾಗೂ ಬೆಂಗಳೂರಿನ 30 ವರ್ಷದ ಯುವತಿ ನಡುವೆ ಸ್ನೇಹ ಏರ್ಪಟ್ಟಿತ್ತು ಎನ್ನಲಾಗಿದೆ. ಯುವತಿ ವಿರುದ್ಧ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದ ವಿಶ್ವನಾಥ್, ‘ಯುವತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನನ್ನನ್ನು ಬೆದರಿಸುತ್ತಿದ್ದಾರೆ’ ಎಂದಿದ್ದರು. ಅದಕ್ಕೆ ಪ್ರತಿ ದೂರು ನೀಡಿದ್ದ ಯುವತಿ, ‘ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದ ವಿಶ್ವನಾಥ್, ಧರ್ಮಸ್ಥಳಕ್ಕೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದಿದ್ದರು’ ಎಂಬುದಾಗಿ ಮೂಲಗಳು ತಿಳಿಸಿವೆ.