ಬೆಂಗಳೂರು:ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಇ–ಕೆವೈಸಿ ಅವಧಿಯನ್ನು ಇದೇ 10ರವರೆಗೆ ವಿಸ್ತರಿಸಿದೆ.
ಇನ್ನೂ ಇ–ಕೆವೈಸಿ ಮಾಡಿಕೊಳ್ಳದ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಪಡಿತರ ಚೀಟಿದಾರರು ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಉಚಿತವಾಗಿ ಇ–ಕೆವೈಸಿ ಮಾಡಿಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಇದುವರೆಗೂ ಶೇ 66.43ರಷ್ಟು ಇ-ಕೆವೈಸಿ ಆಗಿದ್ದು ಶೇ 33.57 ಫಲಾನುಭವಿಗಳ ನೋಂದಣಿ ಬಾಕಿ ಇದೆ ಎಂದು ಹೇಳಲಾಗಿದೆ.