ಬೆಂಗಳೂರು: ಸರ್ಕಾರ ಅಗತ್ಯ ನೆರವು ನೀಡಿದಲ್ಲಿ ರಾಜ್ಯದಾದ್ಯಂತ ಬಸ್ ಓಡಿಸಲು ಸಿದ್ಧವಿರುವುದಾಗಿ ರಾಜ್ಯ ಖಾಸಗಿ ಬಸ್ಗಳ ಮಾಲೀಕರ ಸಂಘ ಹೇಳಿದೆ.
‘ಸಾರ್ವಜನಿಕರಿಗೆ ತೊಂದರೆ ಆಗದಂತೆ ತಡೆಯಲು ಸೇವೆ ಒದಗಿಸುವುದಕ್ಕೆ ನಾವು ಸಿದ್ಧರಿದ್ದೇವೆ. ಸರ್ಕಾರ ಅಗತ್ಯ ನೆರವು ಒದಗಿಸಬೇಕು. ಎಲ್ಲ ಕಡೆಗಳಲ್ಲೂ ಬಸ್ಗಳನ್ನು ಓಡಿಸಲಾಗುವುದು’ ಎಂದು ರಾಜ್ಯ ಖಾಸಗಿ ಬಸ್ಗಳ ಮಾಲೀಕರ ಸಂಘದ ಅಧ್ಯಕ್ಷ ಕೆ.ಟಿ. ರಾಜಶೇಖರ್ ತಿಳಿಸಿದ್ದಾರೆ.