‘ನಗರದ ಜನತೆಗೆ ವಸತಿ ಕಲ್ಪಿಸಬೇಕಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಗೃಹ ಮಂಡಳಿಗೆ ಈವರೆಗೆ ಶೇಕಡ 30 ರಷ್ಟು ಜನರಿಗೂ ವಸತಿ ನೀಡಲು ಸಾಧ್ಯವಾಗಿಲ್ಲ. ಇವುಗಳೂ ಈಗ ದುಬಾರಿಯಾಗಿವೆ. ಇದೀಗ ಕಂದಾಯ ನಿವೇಶನಗಳ ನೋಂದಣಿಗೆ ನಿರ್ಬಂಧ ಹೇರಿಕೆಯಿಂದ ಸ್ವಂತ ಸೂರು ಹೊಂದುವ ನಗರದ ಜನರ ಕನಸು ಕಮರಿ ಹೋಗಲಿದೆ’ ಎಂದರು.