ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಅವರು, ‘ಈ ವಿಚಾರವಾಗಿ ಮಾರ್ಚ್ 24 ರಂದು ಪತ್ರ ಬರೆದಿದ್ದೆ. ಅಲ್ಲದೆ,ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರನ್ನೂ ಭೇಟಿ ಮಾಡಿ ವಾಸ್ತವಾಂಶಗಳನ್ನು ವಿವರಿಸಿದ್ದೇನೆ. ಆದರೆ ನಿಖರವಾದ ಮಾಹಿತಿ ನನಗಾಗಲೀ, ಅಭ್ಯರ್ಥಿಗಳಾಗಲಿ ಲಭ್ಯವಾಗಿಲ್ಲ’ ಎಂದುತಿಳಿಸಿದ್ದಾರೆ.