ಉತ್ಸವ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ, ಪ್ರಸಿದ್ಧ ಕಲಾವಿದರಾದ ಕೇಶವ ಹೆಗಡೆ ಕೊಳಗಿ, ಶಂಕರ ಭಟ್ಟ ಬ್ರಹ್ಮೂರು, ರಾಘವೇಂದ್ರ ಆಚಾರ್ಯ ಜನಸಾಲೆ ಇವರ ಗಾಯನ ಕಾರ್ಯಕ್ರಮ 9 ರಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಸುನೀಲ ಭಂಡಾರಿ, ಶಂಕರ ಭಾಗ್ವತ್, ಗಣಪತಿ ಭಾಗ್ವತ ಕವಾಳೆ, ಪ್ರಸನ್ನ ಹೆಗ್ಗಾರ, ಗಣೇಶ ಗಾಂವ್ಕರ್ ಇವರ ವಾದನದಲ್ಲಿ ‘ಹಿಮ್ಮೇಳ ಗಾನ ವೈಭವ' ನಡೆಯಲಿದೆ. ಶ್ರೀರಕ್ಷಾ ಹಾಗೂ ಚಿಂತನಾ ಇವರ ಭಾಗವತಿಕೆ ನಡೆಯಲಿದೆ.