ಈಗಾಗಲೇ ಅವರಿಗೆ ಹಾಸಿಗೆ, ಆಹಾರ ಸಾಮಗ್ರಿ, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಗಿದೆ. ಕುರಿಕೋಟಾದಲ್ಲಿ ಕೆಲ ಮನೆಗೆ ಳಿಗೆ ನೀರು ನುಗ್ಗಿದೆ. ಅಂಕಲಗಾ ಗ್ರಾಮದಲ್ಲಿ ಹೊಲ ದೊಳಗಿನ ನೀರು ಮನೆಗೆ ನುಗ್ಗಿ ದವಸ ಧಾನ್ಯಗಳು ಹಾಳಾಗಿವೆ. ಹೀಗಾಗಿ ಇವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಪರಿಹಾರ ಕೇಂದ್ರದ ವೀಖ್ಷಣೆಗೆ ಕಂದಾಯ ನಿರೀಕ್ಷಕ ವೆಂಕಟೇಶ ಅಡೋಣಿ, ಗ್ರಾಮ ಲೆಕ್ಕಾಧಿಕಾರಿಗಳಾದ ಪದ್ಮಾವತಿ, ಲೆಕ್ಕಾಧಿಕಾರಿ ಬಸವರಾಜ ಕಟ್ಟಳ್ಳಿ, ಮುಡಬಿ ಗ್ರಾಮ ಲೆಕ್ಕಾಧಿಕಾರಿ ಸಂಜುಕುಮಾರ ಹಾಗೂ ಪಿಡಿಒ ಅರವಿಂದ ಚೌವಾಣ್ ಅವರನ್ನು ನೇಮಿಸಲಾಗಿದೆ ಎಂದರು.