<p><strong>ಬಾಗಲಕೋಟೆ</strong>:ಡಿಕೆ, ಡಿಕೆ... ಅಂತ ಕೂಗಿದ್ದಕ್ಕೆ ಹಾಗೆ ಕೂಗಬೇಡ್ರಪ್ಪಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಮಾನಿಗಳಿಗೆ ಮನವಿ ಮಾಡಿದರು.</p>.<p>ಬನಹಟ್ಟಿ ನಗರದಲ್ಲಿ ನೇಕಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಾಗ ಬೆಂಬಲಿಗರು ಜೈಕಾರ ಕೂಗಿದರು.</p>.<p>ಈ ವೇಳೆ ’ಅದ್ಯಾರೋ ಡಿಕೆ ಪಾಕೆ ಅಂತೀರಾ ಅದನ್ನೆಲ್ಲಾ ಬಿಡ್ರಪ್ಪಾ.ನನ್ನ ಹಾಳು ಮಾಡೋಕೆ ನೀವು ಈ ಕೆಲಸ ಮಾಡ್ತಿರೋದು. ಈಗಲೇ ಕೂಗಿ ನನ್ನ ಹಾಳು ಮಾಡಬೇಡಿ.ನಿಮ್ಮ ಅಭಿಮಾನ ಏನಾದ್ರೂ ಇದ್ದರೆ ಮುಂದೆ ತೋರಿಸುವಿರಂತೆ. ಮುಂದೆ ಸಂದಭ೯ ಬಂದಾಗ ನನ್ನ ಬೆಂಬಲಕ್ಕೆ ಇರಿ ಎಂದು ಮನವಿ ಮಾಡಿದರು.</p>.<p>ಯಾರೂ ಕೂಡ ಜೈಕಾರ ಹಾಕಬೇಡಿ, ಬೇಕಾದ್ರೆ ನಿಮಗೆ ಕೈಮುಗಿದು ಕೇಳುತ್ತೇನೆ, ಶಾಂತವಾಗಿರಿ...ಕೆಳಗಡೆ ಕುಳಿತುಕೋ ಅಂದ್ರೂ ಕೂರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.</p>.<p><strong>ಅದ್ಧೂರಿ ಸ್ವಾಗತ</strong></p>.<p>ಬನಹಟ್ಟಿಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆ ತರಲಾಯಿತು. ಈ ವೇಳೆ ಸೇಬು ಹಣ್ಣುಗಳಿಂದ ಮಾಡಿದ ಬೃಹತ್ ಹಾರವನ್ನು ಕ್ರೇನ್ ಮೂಲಕ ಹಾಕಿ, ಪಟಾಕಿ ಸಿಡಿಸಿ, ಹೂವು ಎರಚಿ ಬೆಂಬಲಿಗರು ಅಭಿಮಾನ ಮೆರೆದರು. ಜಮಖಂಡಿ ಶಾಸಕಆನಂದ ನ್ಯಾಮಗೌಡ, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>:ಡಿಕೆ, ಡಿಕೆ... ಅಂತ ಕೂಗಿದ್ದಕ್ಕೆ ಹಾಗೆ ಕೂಗಬೇಡ್ರಪ್ಪಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಮಾನಿಗಳಿಗೆ ಮನವಿ ಮಾಡಿದರು.</p>.<p>ಬನಹಟ್ಟಿ ನಗರದಲ್ಲಿ ನೇಕಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಾಗ ಬೆಂಬಲಿಗರು ಜೈಕಾರ ಕೂಗಿದರು.</p>.<p>ಈ ವೇಳೆ ’ಅದ್ಯಾರೋ ಡಿಕೆ ಪಾಕೆ ಅಂತೀರಾ ಅದನ್ನೆಲ್ಲಾ ಬಿಡ್ರಪ್ಪಾ.ನನ್ನ ಹಾಳು ಮಾಡೋಕೆ ನೀವು ಈ ಕೆಲಸ ಮಾಡ್ತಿರೋದು. ಈಗಲೇ ಕೂಗಿ ನನ್ನ ಹಾಳು ಮಾಡಬೇಡಿ.ನಿಮ್ಮ ಅಭಿಮಾನ ಏನಾದ್ರೂ ಇದ್ದರೆ ಮುಂದೆ ತೋರಿಸುವಿರಂತೆ. ಮುಂದೆ ಸಂದಭ೯ ಬಂದಾಗ ನನ್ನ ಬೆಂಬಲಕ್ಕೆ ಇರಿ ಎಂದು ಮನವಿ ಮಾಡಿದರು.</p>.<p>ಯಾರೂ ಕೂಡ ಜೈಕಾರ ಹಾಕಬೇಡಿ, ಬೇಕಾದ್ರೆ ನಿಮಗೆ ಕೈಮುಗಿದು ಕೇಳುತ್ತೇನೆ, ಶಾಂತವಾಗಿರಿ...ಕೆಳಗಡೆ ಕುಳಿತುಕೋ ಅಂದ್ರೂ ಕೂರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.</p>.<p><strong>ಅದ್ಧೂರಿ ಸ್ವಾಗತ</strong></p>.<p>ಬನಹಟ್ಟಿಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆ ತರಲಾಯಿತು. ಈ ವೇಳೆ ಸೇಬು ಹಣ್ಣುಗಳಿಂದ ಮಾಡಿದ ಬೃಹತ್ ಹಾರವನ್ನು ಕ್ರೇನ್ ಮೂಲಕ ಹಾಕಿ, ಪಟಾಕಿ ಸಿಡಿಸಿ, ಹೂವು ಎರಚಿ ಬೆಂಬಲಿಗರು ಅಭಿಮಾನ ಮೆರೆದರು. ಜಮಖಂಡಿ ಶಾಸಕಆನಂದ ನ್ಯಾಮಗೌಡ, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>