ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾನುಭೋಗರು ದಾರಿ ತಪ್ಪಿಸಲು ನೋಡಿದ್ದರು: ಬಾಲ್ಯ ನೆನಪಿಸಿಕೊಂಡ ಸಿದ್ದರಾಮಯ್ಯ

ತಮ್ಮೂರ ಶಾನುಭೋಗರ ಮಾತು ನೆನಪಿಸಿಕೊಂಡ ಸಿದ್ದರಾಮಯ್ಯ
Last Updated 13 ಜುಲೈ 2021, 11:15 IST
ಅಕ್ಷರ ಗಾತ್ರ

ಬಾಗಲಕೋಟೆ: ’ಕಾನೂನು ಓದುಕುರುಬರಿಗೆ, ಶೂದ್ರರಿಗೆ ತಲೆಗೆ ಹತ್ತಲ್ಲಯ್ಯ. ಅದು ಮೇಲ್ಜಾತಿಯವರಿಗೆ ಮಾತ್ರ ಎಂದು ನಮ್ಮೂರಲ್ಲೊಬ್ಬ ಶಾನುಭೋಗ ನಮ್ಮಪ್ಪನಿಗೆ ಹೇಳಿದ್ದ. ಕೊನೆಗೆ ಊರಲ್ಲಿ ಪಂಚಾಯ್ತಿ ಸೇರಿಸಿ ನಾನು ಲಾ ಕಾಲೇಜು ಸೇರಿಕೊಂಡಿದ್ದೆ‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಾದಾಮಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ ಮಾತನಾಡಿದ ಅವರು, ’ನೀನು ನಿನ್ನ ಮಗನಿಗೆ ಲಾ ಓದಿಸಬೇಡ, ಪೋಲಿಯಾಗಿಬಿಡ್ತಾನೆ ಅಂತ ಆ ಶಾನುಭೋಗ ಅಪ್ಪನಿಗೆ ನಂಬಿಸಿದ್ದ. ಅವನು ನನಗೆ ಕಲಿಯೋಕೆ ಬಿಡದೆ ನಮ್ಮಪ್ಪನಿಗೆ ಬರೀ ಸುಳ್ಳು ಹೇಳುತ್ತಿದ್ದ‘ ಎಂದು ನೆನಪಿಸಿಕೊಂಡರು.

’ಬುದ್ಧಿವಂತಿಕೆ ಯಾರಪ್ಪನ ಮನೆ ಸ್ವತ್ತಲ್ಲ. ನಾನು ಪ್ರೈಮರಿ ಸ್ಕೂಲ್ ಓದುವಾಗ ಕುರಿ, ಎಮ್ಮೆ ಮೇಯಿಸೋಗು ಅಂತ ಕೆಲವರು ಹೇಳ್ತಿದ್ರು. ಅವರ ಮಾತನ್ನೇ ಕೇಳಿದ್ರೆ ಏನಾಗ್ತಿತ್ತು. ಜನ ಹೇಗೆ ದಾರಿ ತಪ್ಪಿಸುತ್ತಾರೆ ಅನ್ನೋದಕ್ಕೆ ಸಾಕ್ಷಿ ಇದು. ಬುದ್ಧಿವಂತಿಕೆ ವಂಶ ಪಾರಂಪರ್ಯವಾಗಿ ಬರುವುದಿಲ್ಲ, ಅದನ್ನು ಬೆಳೆಸಿಕೊಳ್ಳಬೇಕು. ಹೀಗಾಗಿ ಚೆನ್ನಾಗಿ ಓದಿ‘ ಎಂದು ನೆರೆದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT