ಈಶಾನ್ಯ ವಲಯದ ಐಜಿಪಿಯಾಗಿದ್ದ ಮನೀಶ್ ಖರ್ಬೀಕರ್ ಅವರನ್ನು ಬಳ್ಳಾರಿ ವಲಯದ ಐಜಿಯನ್ನಾಗಿ, ಉತ್ತರ ವಲಯದ (ಬೆಳಗಾವಿ) ಐಜಿಪಿ ಹುದ್ದೆಯಲ್ಲಿದ್ದ ಎಚ್.ಜಿ. ರಾಘವೇಂದ್ರ ಸುಹಾಸ್ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಐಜಿಪಿ ಹುದ್ದೆಗೆ ಮತ್ತು ಕಲಬುರ್ಗಿ ನಗರ ಪೊಲೀಸ್ ಕಮಿಷನರ್ ಎನ್. ಸತೀಶ್ ಕುಮಾರ್ ಅವರನ್ನು ಉತ್ತರ ವಲಯದ ಐಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.