ಕುವೆಂಪು ಅವರು ನಾಡಿನ ಸಾಂಸ್ಕೃತಿಕ ಲೋಕದ ಸಾಕ್ಷಿ ಪ್ರಜ್ಞೆ, ವಿಶ್ವಮಾನವ ಸಂದೇಶ ಸಾರಿದ ಜಗದ ಕವಿ, ಶತಮಾನಗಳಿಂದ ಆದರ್ಶಪ್ರಾಯರಾದ ಮಹಾನ್ ಚೇತನ. ಕುವೆಂಪು ಅವರ ಬದುಕು ಮಾನವ ಕುಲಕ್ಕೆ ಮಾದರಿಯಾದುದು. ಯುವಜನರು ಸರ್ವಕಾಲಕ್ಕೂ ಕುವೆಂಪು ಅವರಿಂದ ಪ್ರಭಾವಿತರಾಗಿ ಕಲಿಯುವುದು ಬಹಳಷ್ಟಿದೆ. ಕುವೆಂಪು ಅವರು ನಮ್ಮ ಕಾಲಘಟ್ಟದಲ್ಲಿ ನಮ್ಮೊಂದಿಗೆ ಬಾಳಿ, ಬದುಕಿದ್ದು ನಮ್ಮೆಲ್ಲರ ಸುದೈವವಾಗಿದೆ ಎಂದು ತಿಳಿಸಿದ್ದಾರೆ.