‘ಗುಬ್ಬಿ ವೀರಣ್ಣ ಮತ್ತು ಗುಬ್ಬಿ ಕಂಪನಿಯ ಹೆಸರು ಹೇಳಿಕೊಂಡು ನಾವು ಬದುಕು ಕಟ್ಟಿಕೊಂಡಿದ್ದೇವೆ. ಆದರೆ, ಅವರ ಸಮಾಧಿಯ ಇಂಥ ದುಃಸ್ಥಿತಿಯ ಬಗ್ಗೆ ಏನೂ ಮಾಡುತ್ತಿಲ್ಲ. ಕಲಾವಿದರು, ರಂಗಾಸಕ್ತರು ಎಲ್ಲರೂ ಒಗ್ಗೂಡಿ, ಕನಿಷ್ಠಪಕ್ಷ ಜಾಗವನ್ನು ಚೊಕ್ಕವಾಗಿ ಇಟ್ಟುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇನ್ನಾದರೂ ಈ ಕೆಲಸ ಪ್ರಾರಂಭವಾಗಲಿ’ ಎನ್ನುವುದು ರಂಗಕರ್ಮಿ ಡಾ. ಲಕ್ಷ್ಮಣದಾಸ್ ಅವರ ಅಭಿಪ್ರಾಯ.