‘ನಮ್ಮ ರಾಜ್ಯದವರಿಗೇ ಟೆಂಡರ್ ಸಿಕ್ಕಿದರೆ, ರಾಜ್ಯ ಸರ್ಕಾರಕ್ಕೆ ₹8 ಕೋಟಿಯವರೆಗೆ ಉಳಿತಾಯವಾಗುತ್ತದೆ. ಜಿಎಸ್ಟಿ ಆದಾಯ ಕೂಡ ಬರುತ್ತದೆ. ಕೊರೊನಾ ಕಾಲದಲ್ಲಿ ರಾಜ್ಯದ ಉದ್ದಿಮೆಗಳಿಗೆ ಸಹಕರಿಸಿ, ಉದ್ಯೋಗ ಸೃಷ್ಟಿಸಬೇಕಾದ ಈ ಸಂದರ್ಭದಲ್ಲಿ ಸರ್ಕಾರ ಟೆಂಡರ್ ನಿಯಮಗಳನ್ನು ಪರಿಷ್ಕರಿಸುವುದು ಸಮಯೋಚಿತ’ ಎಂದು ಅವರು ಹೇಳಿದರು.