ಬೆಂಗಳೂರು: ಸ್ವಾಮಿ ವಿವೇಕಾನಂದ ಅವರ ಪುಣ್ಯತಿಥಿಯ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಚಿಂತನ ವರ್ಗ ಬೈಠಕ್ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವರ್ಚ್ಯುಯಲ್ ಆಗಿ ಭಾಗವಹಿಸಿದರು.
ತಮ್ಮ ಅಧಿಕೃತ ನಿವಾಸದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಆರ್ಎಸ್ಎಸ್ ಪ್ರಮುಖರ ಮಾತುಗಳನ್ನು ಆಲಿಸಿದರು.
ಇದಕ್ಕೂ ಮೊದಲು, ತಮ್ಮ ನಿವಾಸದಲ್ಲೇ ವಿವೇಕಾನಂದರ ಪುಣ್ಯತಿಥಿ ಆಚರಿಸಿದ ಮುಖ್ಯಮಂತ್ರಿ, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.