‘ಅಸಮಾನತೆ ವಿರುದ್ದ ಬಸವಣ್ಣನವರು ಮನೆಯನ್ನು ಬಿಟ್ಟರು. ಅದು ಜಗಜ್ಜಾಹಿರು. ಆದರೆ, ಪಠ್ಯಪುಸ್ತಕದಲ್ಲಿ ಸೇರಿಸಿದ್ದೇನು?
ಅದನ್ನು ನೋಡಿ ನಮಗೆ ಬಹಳ ಬೇಸರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ತಂದೆಯವರು ಬಸವಣ್ಣನ ಭಕ್ತರಾಗಿದ್ದರು. ಅನೇಕ ಪೂಜ್ಯರ ಮಾರ್ಗದರ್ಶನ ನಿಮಗಿದೆ. ಪುಸ್ತಕ ಬಿಡುಗಡೆ ಆಗುವ ಮೊದಲು ಲೋಪದೋಷ ಸರಿಪಡಿಸಿ. ಬಸವಣ್ಣನವರ ತತ್ವ-ಸಿದ್ದಾಂತಕ್ಕೆ ಧಕ್ಕೆ ತಂದರೆ ನಾವು ಸಹಿಸಲ್ಲ’ಎಂದು ಎಚ್ಚರಿಕೆ ನೀಡಿದರು.