ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದಿಂದ ಎದುರಾದ ಪ್ರಶ್ನೆಗೆ ಉತ್ತರಿಸಿದ ಅವರು ‘ನಮ್ಮ ಹಿಂದಿನ ಮಿತ್ರರೊಬ್ಬರು ಡ್ರಗ್ಸ್ ವಿಚಾರಕ್ಕೆ ಹೊರತಾಗಿ ಹಲವು ಸಂಗತಿಗಳನ್ನು ಎಳೆಯುವ ಪ್ರಯತ್ನ ನಡೆಸಿದ್ದಾರೆ,ಈ ರೀತಿ ವಿಷಯಾಂತರ ಮೂಲಕ ತನಿಖೆ ಹಾದಿ ತಪ್ಪುವುದು ಸರಿಯಲ್ಲ ತನಿಖೆ ಈಗ ಸಾಗಿರುವ ಹಾದಿಯಲ್ಲೇ ಮುಂದುವರೆಯಲಿ ಎಂಬುದು ನಮ್ಮ ಒತ್ತಾಯ’ಎಂದರು.