ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಂಡತನದ ವಿರುದ್ಧ ಜನಾಭಿಪ್ರಾಯ: ದತ್ತ

Last Updated 27 ಸೆಪ್ಟೆಂಬರ್ 2020, 20:59 IST
ಅಕ್ಷರ ಗಾತ್ರ

ದಾವಣಗೆರೆ: ಭಂಡತನದಿಂದ ಯಾವುದೇ ಕಾಯ್ದೆಗಳನ್ನು ನೀವು ಜಾರಿ ಮಾಡಬಹುದು. ಆದರೆ ಜನ ನಿಮ್ಮ ಪರ ಇಲ್ಲ ಎಂಬುದನ್ನು ಬಂದ್‌ ತೋರಿಸಿಕೊಡಲಿದೆ ಎಂದು ಜೆಡಿಎಸ್ ನಾಯಕ ವೈ.ಎಸ್‌.ವಿ. ದತ್ತ ಹೇಳಿದರು.

ಬಂದ್‌, ಹೋರಾಟದ ಪರಿಣಾಮ ತಾರ್ಕಿಕ ಅಂತ್ಯ ಕಾಣದೇ ಇರಬಹುದು. ಜನರಿಗೆ ಒಳಿತು ಮಾಡದ ಕಾಯ್ದೆಗಳನ್ನು ಜನರು ಒಪ್ಪುವುದಿಲ್ಲ, ವಿರೋಧಿಸುತ್ತಾರೆ ಎಂಬುದು ಗೊತ್ತಾಲಿದೆ. ಅಧಿವೇಶನದಲ್ಲಿ ಕೂಡ ಪರಿಣಾಮಕಾರಿಯಾಗಿ ವಿರೋಧಿಸಲು ಅವಕಾಶ ಸಿಕ್ಕಿಲ್ಲ. ಹಾಗಾಗಿ ಹೋರಾಟ ಅನಿವಾರ್ಯ ಎಂದು ಸುದ್ದಿಗಾರರಿಗೆ ಭಾನುವಾರ ತಿಳಿಸಿದರು.

ಜನಪರ ಚಳವಳಿಗಳು ಹಿಂದಿನಷ್ಟು ಪ್ರಬಲವಾಗಿಲ್ಲ, ನಿಸ್ತೇಜವಾಗಿವೆ. ನಾಲ್ಕೈದು ದಶಕಗಳ ಹಿಂದೆ ನಡೆದಿದ್ದ ಗೋಕಾಕ್‌ ಚಳವಳಿ, ದಲಿತ ಚಳವಳಿ, ರೈತ ಚಳವಳಿ ಮಾದರಿಯಲ್ಲಿ ಪ್ರಬಲವಾಗಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT