ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಸಚಿವನಾಗಿ ಸರಿಯಾಗಿ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿಯೇ ಸಮಾಜದ ಅತ್ಯಂತ ಕೆಳವರ್ಗ ಹಾಗೂ ದುರ್ಬಲ ವರ್ಗದ ಬಹುದಿನಗಳ ಕನಸು ಈಡೇರಿದೆ. 1,873 ಕೊಳೆಗೇರಿ ಪ್ರದೇಶಗಳ 3.13 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಪ್ರಸ್ತಾವನೆ ಇದಾಗಿದ್ದು, ರಾಜ್ಯದ ಸುಮಾರು 16 ಲಕ್ಷ ಕೊಳೆಗೇರಿ ನಿವಾಸಿಗಳಿಗೆ ಇದರಿಂದ ಪ್ರಯೋಜನ ಆಗಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 683 ಎಕರೆ ಸರ್ಕಾರಿ ಜಾಗದಲ್ಲಿ 239 ಕೊಳೆಗೇರಿ ಪ್ರದೇಶಗಳಿವೆ’ ಎಂದರು.