<p>ತಂದೆ ಮಗುವಿಗೆ ಜನ್ಮವನ್ನು ಮಾತ್ರ ಕೊಡುತ್ತಾನೆ. ಆದರೆ, ಗುರು ಅವನನ್ನು ‘ಜನ್ಮ ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುತ್ತಾನೆ. ಆದ್ದರಿಂದಲೇ ತಂದೆಗಿಂತಲೂ ಗುರುವನ್ನು ಶ್ರೇಷ್ಠವೆಂದು ಹೇಳಲಾಗಿದೆ.</p>.<p>ಒಂದು ಬದ್ದ ಜೀವ ಇನ್ನೊಂದು ಬದ್ದ ಜೀವನವನ್ನು ಉದ್ದಾರ ಮಾಡಲಾರದು. ಗುರುಗಳು ಮುಕ್ತರಾಗಿರುವುದರಿಂದಲೇ ಶಿಷ್ಯನ ಉದ್ದಾರವನ್ನು ಮಾಡಬಲ್ಲರು. ಶ್ರೀ ಗುರುವು ದೊರೆಯದೇ ಮೋಕ್ಷಕ್ಕೆ ಹೋಗುವ ಮಾರ್ಗವು ಸಿಗುವುದಿಲ್ಲ. ಆದ ಕಾರಣ ಮೊದಲು ಶ್ರೀಗುರುವಿನ ಚರಣಗಳನ್ನು ಹಿಡಿಯಬೇಕು.</p>.<p>‘ಕಂಡುದ ಹಿಡಿಯಲೊಲ್ಲದೆ ಕಾಣದುದನರಿಸಿ ಹಿಡಿದಿಹೆನೆಂದರೆ ಸಿಕ್ಕದೆಂದು ಬಳಲಿಕೆ ನೋಡಾ! ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ ಕಾಣದುದ ಕಾಣಬಹುದು ಗುಹೇಶ್ವರ’ ಎಂದು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ಗುರುವಿನ ಮಹತ್ವದ ಕುರಿತು ತಿಳಿಸಿಕೊಟ್ಟಿದ್ದಾರೆ.</p>.<p>ಗುರು ಕೃಪಾದೃಷ್ಠಿ ಪ್ರಾಪ್ತವಾಗಲು ಪ್ರಯತ್ನಿಸಬೇಕು. ಗುರುವು ಕ್ಷಣಾರ್ಧದಲ್ಲಿ ತಮ್ಮಂತೆ ಮೋಕ್ಷದ ಅಧಿಕಾರಿಯನ್ನಾಗಿ ಮಾಡುತ್ತಾನೆ. ಅವರಿಗೆ ಕಾಲ, ಸಮಯದ ಅವಶ್ಯಕತೆ ಇರುವುದಿಲ್ಲ. ಗುರುವಿನ ಮಹಿಮೆ ಎಷ್ಟಿದೆ ಎಂದರೆ ಅವರಿಗೆ ಸ್ಪರ್ಶಮಣಿಯ ಉಪಮೆ ಕೊಡಲು ಸಾಧ್ಯವಿಲ್ಲ.</p>.<p>ಒಬ್ಬನೇ ಸಾಧನೆ ಮಾಡಿ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ಬಹಳ ಕಠಿಣವಾದುದ್ದು. ಆದ್ದರಿಂದ ಆಧ್ಯಾತ್ಮದ ಗುರುವಿನ ಮಾರ್ಗದರ್ಶನ ಪಡೆದರೆ ಈಶ್ವರಪ್ರಾಪ್ತಿಯು ಸಾಧ್ಯವಾಗುತ್ತದೆ. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಬೋಧಿಸಿದ್ದಾರೆ. ಅದಕ್ಕಾಗಿ ಗುರುವಿನ ಉಪದೇಶದಿಂದ ನಾವೆಲ್ಲ ಅಜ್ಞಾನದ ಕತ್ತಲೆ ಕಳೆದುಕೊಂಡು ಜ್ಞಾನಿಗಳಾಗೋಣ…</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಂದೆ ಮಗುವಿಗೆ ಜನ್ಮವನ್ನು ಮಾತ್ರ ಕೊಡುತ್ತಾನೆ. ಆದರೆ, ಗುರು ಅವನನ್ನು ‘ಜನ್ಮ ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುತ್ತಾನೆ. ಆದ್ದರಿಂದಲೇ ತಂದೆಗಿಂತಲೂ ಗುರುವನ್ನು ಶ್ರೇಷ್ಠವೆಂದು ಹೇಳಲಾಗಿದೆ.</p>.<p>ಒಂದು ಬದ್ದ ಜೀವ ಇನ್ನೊಂದು ಬದ್ದ ಜೀವನವನ್ನು ಉದ್ದಾರ ಮಾಡಲಾರದು. ಗುರುಗಳು ಮುಕ್ತರಾಗಿರುವುದರಿಂದಲೇ ಶಿಷ್ಯನ ಉದ್ದಾರವನ್ನು ಮಾಡಬಲ್ಲರು. ಶ್ರೀ ಗುರುವು ದೊರೆಯದೇ ಮೋಕ್ಷಕ್ಕೆ ಹೋಗುವ ಮಾರ್ಗವು ಸಿಗುವುದಿಲ್ಲ. ಆದ ಕಾರಣ ಮೊದಲು ಶ್ರೀಗುರುವಿನ ಚರಣಗಳನ್ನು ಹಿಡಿಯಬೇಕು.</p>.<p>‘ಕಂಡುದ ಹಿಡಿಯಲೊಲ್ಲದೆ ಕಾಣದುದನರಿಸಿ ಹಿಡಿದಿಹೆನೆಂದರೆ ಸಿಕ್ಕದೆಂದು ಬಳಲಿಕೆ ನೋಡಾ! ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ ಕಾಣದುದ ಕಾಣಬಹುದು ಗುಹೇಶ್ವರ’ ಎಂದು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ಗುರುವಿನ ಮಹತ್ವದ ಕುರಿತು ತಿಳಿಸಿಕೊಟ್ಟಿದ್ದಾರೆ.</p>.<p>ಗುರು ಕೃಪಾದೃಷ್ಠಿ ಪ್ರಾಪ್ತವಾಗಲು ಪ್ರಯತ್ನಿಸಬೇಕು. ಗುರುವು ಕ್ಷಣಾರ್ಧದಲ್ಲಿ ತಮ್ಮಂತೆ ಮೋಕ್ಷದ ಅಧಿಕಾರಿಯನ್ನಾಗಿ ಮಾಡುತ್ತಾನೆ. ಅವರಿಗೆ ಕಾಲ, ಸಮಯದ ಅವಶ್ಯಕತೆ ಇರುವುದಿಲ್ಲ. ಗುರುವಿನ ಮಹಿಮೆ ಎಷ್ಟಿದೆ ಎಂದರೆ ಅವರಿಗೆ ಸ್ಪರ್ಶಮಣಿಯ ಉಪಮೆ ಕೊಡಲು ಸಾಧ್ಯವಿಲ್ಲ.</p>.<p>ಒಬ್ಬನೇ ಸಾಧನೆ ಮಾಡಿ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ಬಹಳ ಕಠಿಣವಾದುದ್ದು. ಆದ್ದರಿಂದ ಆಧ್ಯಾತ್ಮದ ಗುರುವಿನ ಮಾರ್ಗದರ್ಶನ ಪಡೆದರೆ ಈಶ್ವರಪ್ರಾಪ್ತಿಯು ಸಾಧ್ಯವಾಗುತ್ತದೆ. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಬೋಧಿಸಿದ್ದಾರೆ. ಅದಕ್ಕಾಗಿ ಗುರುವಿನ ಉಪದೇಶದಿಂದ ನಾವೆಲ್ಲ ಅಜ್ಞಾನದ ಕತ್ತಲೆ ಕಳೆದುಕೊಂಡು ಜ್ಞಾನಿಗಳಾಗೋಣ…</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>