‘ಕೋವಿಡ್ ಎರಡನೇ ಅಲೆ ಬರುವ ಬಗ್ಗೆ ತಜ್ಞರು, ಪ್ರತಿಪಕ್ಷಗಳ ನಾಯಕರು ಹೇಳುತ್ತಲೇ ಬಂದಿದ್ದರು. ಔಷಧ, ಪರಿಕರಗಳ ಅಭಾವ ಇದೆ. ಆಮ್ಲಜನಕ, ರೆಮ್ಡಿಸಿವಿರ್ ಸಿಗುತ್ತಿಲ್ಲ. ಚಿಕಿತ್ಸೆಯೇ ದುರ್ಬಲವಾಗಿದೆ. ಈ ಸಂಬಂಧ ಹಲವು ಬಾರಿ ನಾನು ಎಚ್ಚರಿಕೆ ನೀಡಿದ್ದೇನೆ. ಆದರೂ, ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಚಿಕಿತ್ಸೆ ದೊರೆಯುವ ವಿಶ್ವಾಸ ಜನರಲ್ಲಿ ಕುಗ್ಗಿ ಹೋಗಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.