<p><strong>ರಾಮನಗರ</strong>: ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶನಿವಾರ ಕನಕಪುರಕ್ಕೆ ಆಗಮಿಸಿದ್ದು, ದೇಗುಲಗಳ ಭೇಟಿ ಕೈಗೊಂಡಿದ್ದಾರೆ.</p>.<p>ಮನೆ ದೇವರು ಕೆಂಕೇರಮ್ಮ ದೇವಿಗೆ ಮೊದಲ ಪೂಜೆ ಸಲ್ಲಿಸಿದ ಡಿಕೆಶಿ, ಪಾದಯಾತ್ರೆ ಯಶಸ್ಸಿಗೆ ಪ್ರಾರ್ಥಿಸಿದರು. ಬಳಿಕ ಕಬ್ಬಾಳಮ್ಮ, ಸಂಗಮ ಬಳಿಯ ಈಶ್ವರನ ಸನ್ನಿಧಿಗೂ ಅವರು ಭೇಟಿ ನೀಡಲಿದ್ದಾರೆ.</p>.<p>ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಶಿವಕುಮಾರ್ ' ನಾವು ಮಾಡುತ್ತಿರುವುದು ಪ್ರತಿಭಟನೆ ಅಲ್ಲ. ಜನಾಂದೋಲನ. ಸರ್ಕಾರ ಏನೇ ನಿರ್ಬಂಧ ವಿಧಿಸಿದರೂ ನೀರಿಗಾಗಿ ನಮ್ಮ ನಡಿಗೆ ನಿಲ್ಲದು' ಎಂದರು.</p>.<p>'ರಾಜ್ಯದಲ್ಲಿ ಕೊರೊನಾ ಎಲ್ಲಿದೆ? ಒಬ್ಬರಾದರೂ ಐಸಿಯು ನಲ್ಲಿ ಮಲಗಿದ್ದಾರ? ರಾಜಕೀಯಕೋಸ್ಕರ ಯಾಕೆ ಸುಮ್ಮನೆ ಕಿರುಕುಳ ಕೊಡುತ್ತೀರ' ಎಂದು ಅವರು ಪ್ರಶ್ನಿಸಿದರು.</p>.<p>ಜಿಲ್ಲಾಡಳಿತ ಎಲ್ಲ ಪ್ರವಾಸಿ ತಾಣಗಳಿಗೂ ನಿರ್ಬಂಧ ಹೇರಿದೆ. ಕೇಸ್ ಹಾಕೋ ಹಾಕಿದ್ದರೆ ಎಲ್ಲರ ಮೇಲೂ ಹಾಕಲಿ ಎಂದರು.</p>.<p><a href="https://www.prajavani.net/india-news/india-may-see-10-lakh-covid-cases-a-day-by-jan-end-iisc-isi-model-900068.html" itemprop="url">ಜನವರಿ ಅಂತ್ಯದ ವೇಳೆಗೆ ನಿತ್ಯ 10 ಲಕ್ಷ ಕೋವಿಡ್ ಪ್ರಕರಣ: ಐಐಎಸ್ಸಿ-ಐಎಸ್ಐ ತಂಡ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶನಿವಾರ ಕನಕಪುರಕ್ಕೆ ಆಗಮಿಸಿದ್ದು, ದೇಗುಲಗಳ ಭೇಟಿ ಕೈಗೊಂಡಿದ್ದಾರೆ.</p>.<p>ಮನೆ ದೇವರು ಕೆಂಕೇರಮ್ಮ ದೇವಿಗೆ ಮೊದಲ ಪೂಜೆ ಸಲ್ಲಿಸಿದ ಡಿಕೆಶಿ, ಪಾದಯಾತ್ರೆ ಯಶಸ್ಸಿಗೆ ಪ್ರಾರ್ಥಿಸಿದರು. ಬಳಿಕ ಕಬ್ಬಾಳಮ್ಮ, ಸಂಗಮ ಬಳಿಯ ಈಶ್ವರನ ಸನ್ನಿಧಿಗೂ ಅವರು ಭೇಟಿ ನೀಡಲಿದ್ದಾರೆ.</p>.<p>ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಶಿವಕುಮಾರ್ ' ನಾವು ಮಾಡುತ್ತಿರುವುದು ಪ್ರತಿಭಟನೆ ಅಲ್ಲ. ಜನಾಂದೋಲನ. ಸರ್ಕಾರ ಏನೇ ನಿರ್ಬಂಧ ವಿಧಿಸಿದರೂ ನೀರಿಗಾಗಿ ನಮ್ಮ ನಡಿಗೆ ನಿಲ್ಲದು' ಎಂದರು.</p>.<p>'ರಾಜ್ಯದಲ್ಲಿ ಕೊರೊನಾ ಎಲ್ಲಿದೆ? ಒಬ್ಬರಾದರೂ ಐಸಿಯು ನಲ್ಲಿ ಮಲಗಿದ್ದಾರ? ರಾಜಕೀಯಕೋಸ್ಕರ ಯಾಕೆ ಸುಮ್ಮನೆ ಕಿರುಕುಳ ಕೊಡುತ್ತೀರ' ಎಂದು ಅವರು ಪ್ರಶ್ನಿಸಿದರು.</p>.<p>ಜಿಲ್ಲಾಡಳಿತ ಎಲ್ಲ ಪ್ರವಾಸಿ ತಾಣಗಳಿಗೂ ನಿರ್ಬಂಧ ಹೇರಿದೆ. ಕೇಸ್ ಹಾಕೋ ಹಾಕಿದ್ದರೆ ಎಲ್ಲರ ಮೇಲೂ ಹಾಕಲಿ ಎಂದರು.</p>.<p><a href="https://www.prajavani.net/india-news/india-may-see-10-lakh-covid-cases-a-day-by-jan-end-iisc-isi-model-900068.html" itemprop="url">ಜನವರಿ ಅಂತ್ಯದ ವೇಳೆಗೆ ನಿತ್ಯ 10 ಲಕ್ಷ ಕೋವಿಡ್ ಪ್ರಕರಣ: ಐಐಎಸ್ಸಿ-ಐಎಸ್ಐ ತಂಡ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>