ಡಿ. 31ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು.ಇದೇ 7ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಂತರ ಚುನಾವಣಿಗೆ ದಿನ ಘೋಷಣೆ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಭವ್ಯಾ, ಸಂದೀಪ ನಾಯಕ ಮತ್ತು ಸಯ್ಯದ್ ಖಾಲಿದ್ ಕಣದಲ್ಲಿರುವ ಇತರರು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಬಿರುಸಿನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಅದರಲ್ಲೂ ಮಂಜುನಾಥ್ (ಒಕ್ಕಲಿಗ), ಮಿಥುನ್ (ಬಂಟ), ರಕ್ಷಾ ರಾಮಯ್ಯ(ಹಿಂದುಳಿದ ವರ್ಗ), ಮೊಹಮ್ಮದ್ ನಲಪಾಡ್ (ಮುಸ್ಲಿಂ) ಈ ಪಟ್ಟದ ಮೇಲೆ ಕಣ್ಣಿಟ್ಟಿದ್ದು, ಹಿರಿಯ ನಾಯಕರ ಮೂಲಕ ತಮ್ಮ ಪರ ಒಲವು ಮೂಡಿಸಲು ಮುಂದಾಗಿದ್ದಾರೆ. ಈ ಮಧ್ಯೆ, ಯಾರನ್ನು ಬೆಂಬಲಿಸಬೇಕು ಎನ್ನುವ ವಿಚಾರದಲ್ಲಿ ಹಿರಿಯ ನಾಯಕ ರಲ್ಲಿ ಏಕ ಅಭಿಪ್ರಾಯ ಇಲ್ಲ ಎನ್ನಲಾಗಿದೆ.