ಇಬ್ಬರ ನಡುವೆ ವೈಮನಸ್ಸು ಹೆಚ್ಚಿದ ಕಾರಣದಿಂದ ಇತ್ತೀಚೆಗೆ ಕಟ್ಟಡವನ್ನು ಬಲವಂತವಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದ ಜಮೀರ್, ಸುಣ್ಣ, ಬಣ್ಣ ಬಳಿಸಿ ದುರಸ್ತಿಯನ್ನೂ ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಕ್ಕಾಗಿ ಅತಿಥಿ ಗೃಹವನ್ನು ಬಿಟ್ಟುಕೊಡುವುದಕ್ಕಾಗಿ ನವೀಕರಣ ಮಾಡುತ್ತಿರುವುದಾಗಿ ಜಮೀರ್ ಆಪ್ತರ ಬಳಿ ಹೇಳಿಕೊಂಡಿದ್ದಾರೆ.